ದೇಶದಾದ್ಯಂತ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಮುಖ್ಯ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಐಐಟಿ ಸೇರಿದಂತೆ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಈ ಪರೀಕ್ಷೆ ನಡೆಸಿತ್ತು. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಕರ್ನಾಟಕದ ಮೂವರು ವಿದ್ಯಾರ್ಥಿಗಳು ನೂರಕ್ಕೆ ನೂರು (ಶೇ.100) ಅಂಕ ಗಳಿಸಿದ್ದಾರೆ.
ಜಯನಗರದ ಅಲೆನ್ ಕರಿಯರ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳಾದ ತನಿಶ್ ಸಿಂಗ್ ಖುರಾನಾ, ಅಖಿಲ ಎಂಬವರು ಭಾರತದಲ್ಲೇ 22ನೇ ಸ್ಥಾನಗಳಿಸಿದ್ದಾರೆ. ರಿಧಿ ಕಮಲೇಶ್ ಕುಮಾರ್, ಮಹೇಶ್ವರಿ ಹಾಗೂ ನಿವೇದ್ ಅಯಿಲ್ಲಿತ್ ನಂಬಿಯಾರ್ ಎಂಬ ವಿದ್ಯಾರ್ಥಿಗಳು ದೇಶದಲ್ಲೇ 23ನೇ ಸ್ಥಾನ ಪಡೆದಿದ್ದಾರೆ.
ಜೆಇಇ ಮುಖ್ಯ ಪರೀಕ್ಷೆಯ ನಂತರ ನಡೆಯುವ ಜೆಇಇ ಅಡ್ವಾನ್ಸ್ 2023 ಪರೀಕ್ಷೆ ಜೂನ್ 4 ರಂದು ನಡೆಯಲಿದೆ. ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 30 ರಿಂದ ಪ್ರಾರಂಭವಾಗಲಿದೆ ಎಂದು ಐಐಟಿ ಗುವಾಹಟಿ ಈಗಾಗಲೇ ಪ್ರಕಟಿಸಿದೆ. ಪ್ರತಿ ವರ್ಷ ಅಡ್ವಾನ್ಸ್ಡ್ ಬರೆಯಲು ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯು ಮುಖ್ಯ ಶ್ರೇಣಿಯ ಫಲಿತಾಂಶದ ಮರುದಿನದಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ಬೈಜೂಸ್ ಸಿಇಒ ಕಚೇರಿ, ನಿವಾಸದ ಮೇಲೆ ಇ.ಡಿ ದಾಳಿ