- ಹತ್ತು ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಿ ಮೂರನೇ ಪಟ್ಟಿ ಬಿಟ್ಟ ಬಿಜೆಪಿ
- ಲಿಂಬಾವಳಿ, ರಾಮದಾಸ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಟಿಕೆಟ್ ಮಿಸ್
2023ರ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಹತ್ತು ಕ್ಷೇತ್ರಗಳ ಹೆಸರು ಬಿಡುಗಡೆ ಮಾಡಿರುವ ಪಟ್ಟಿಯಲ್ಲೂ ಬಿಜೆಪಿ ಕೆಲ ಅಚ್ಚರಿಯ ಹೆಸರುಗಳನ್ನು ಕಾಣಿಸಿದೆ.
ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಮದಾಸ್ಗೆ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಕೈ ತಪ್ಪಿದರೆ, ಸೋಮಣ್ಣರ ವಲಸೆ ಕಾರಣದಿಂದ ತೆರವಾದ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರಕ್ಕೆ ಬಿಬಿಎಂಪಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಉಳಿದಂತೆ ಮಹದೇವಪುರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅವರಿಗೂ, ಹೆಬ್ಬಾಳದಲ್ಲಿ ಕಟ್ಟಾ ಪುತ್ರ ಜಗದೀಶ್ ಗೂ ಟಿಕೆಟ್ ನೀಡಲಾಗಿದೆ. ಹಾಗೆಯೇ ಪ್ರಹ್ಲಾದ್ ಜೋಶಿ ಗ್ಯಾಂಗ್ನ ಮಹೇಶ್ ಟೆಂಗಿನಕಾಯಿಗೆ ಕಾಂಗ್ರೆಸ್ನ ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಹುಬ್ಬಳ್ಳಿ ಸೆಂಟ್ರಲ್ ಟಿಕೆಟ್ ನೀಡಲಾಗಿದೆ.
ಉಳಿದಂತೆ ಪಟ್ಟಿ ಹೀಗಿದೆ.
ಸೇಡಮ್ – ರಾಜಕುಮಾರ ಪಾಟೀಲ್
ಕೊಪ್ಪಳ – ಶ್ರೀಮತಿ.ಮಂಜುಳಾ ಅಮರೇಶ್
ರೋಣ – ಶ್ರೀ ಕಳಕಪ್ಪ ಬಂಡಿ
ಹುಬ್ಬಳ್ಳಿ-ಧಾರವಾಡ-ಕೇಂದ್ರ -ಶ್ರೀ ಮಹೇಶ ಟೆಂಗಿನಕಾಯಿ
ಹಗರಿಬೊಮ್ಮನಹಳ್ಳಿ (SC)- ಶ್ರೀ ಬಿ ರಾಮಣ್ಣ
ಹೆಬ್ಬಾಳ -ಶ್ರೀ ಕಟ್ಟಾ ಜಗದೀಶ್
ಗೋವಿಂದರಾಜ್ ನಗರ -ಶ್ರೀ ಉಮೇಶ್ ಶೆಟ್ಟಿ,
ನಾಗತಾನ್ (SC)-ಸಂಜೀವ್ ಐಹೊಳೆ
ಮಹದೇವಪುರ (SC) – ಶ್ರೀಮತಿ.ಮಂಜುಳಾ ಅರವಿಂದ ಲಿಂಬಾವಳಿ
ಕೃಷ್ಣರಾಜ – ಶ್ರೀ ಶ್ರೀವತ್ಸ,