ಚುನಾವಣೆ 2023 | ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸೇರಿದ್ದ ಎಂಟಿಬಿ ಘೋಷಿತ ಆಸ್ತಿ ₹1,510 ಕೋಟಿ

Date:

2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಮತ್ತು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಎಂಎಲ್‌ಸಿಯಾಗಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯ ಪ್ರಮಾಣವನ್ನು ಘೋಷಿಸಿದ್ದಾರೆ. ಅವರ ಬಳಿ ₹1,510 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ.

2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿದ್ದರು. ಉಪಚುನಾವಣೆ ವೇಳೆ, ಅವರು ತಮ್ಮ ಬಳಿ ₹1,015 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದರು. ಆ ಚುನಾವಣೆಯಲ್ಲಿ ಸೋಲುಂಡ ಅವರು, ಬಳಿಕ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ)ರಾದರು. ಅಲ್ಲದೆ, ಪೌರಾಡಳಿತ ಸಚಿವರೂ ಆದರು. ಇದೀಗ, ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಅವರ ಆಸ್ತಿ ₹495 ಕೋಟಿಯಷ್ಟು ಹೆಚ್ಚಾಗಿದೆ.

ಪ್ರಸ್ತುತ ಎಂಟಿಬಿ ನಾಗರಾಜ್‌ ಬಳಿ ₹372 ಕೋಟಿ ಮತ್ತು ಅವರ ಪತ್ನಿ ಶಾಂತಕುಮಾರಿ ಬಳಿ ₹163 ಕೋಟಿದ ಚರಾಸ್ತಿ ಇದೆ. ನಾಗರಾಜ್‌ ಬಳಿ ₹792 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಅವರ ಪತ್ನಿ ಬಳಿ ₹274 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಂಟಿಬಿ ನಾಗರಾಜ್‌ ಬಳಿ ₹64 ಲಕ್ಷ ಮತ್ತು ಪತ್ನಿ ಬಳಿ ₹34 ಲಕ್ಷ ನಗದು ಹಣವಿದೆ. ಜೊತೆಗೆ, ₹1.1 ಕೋಟಿ ಮೌಲ್ಯದ 214 ಕೆ.ಜಿ ಬೆಳ್ಳಿ, ₹98 ಲಕ್ಷ ಮೌಲ್ಯದ ವಜ್ರ, ₹38 ಲಕ್ಷ ಮೌಲ್ಯದ ಚಿನ್ನ ಸೇರಿದಂತೆ ಒಟ್ಟು ₹2.41 ಕೋಟಿ ಮೌಲ್ಯದ ಆಭರಣಗಳನ್ನು ಎಂಟಿಬಿ ಹೊಂದಿದ್ದಾರೆ. ಅವರ ಪತ್ನಿ ಬಳಿ ಒಟ್ಟು ₹ 1.64 ಕೋಟಿ ಮೌಲ್ಯದ ಆಭರಣಗಳಿವೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಜನಾರ್ದನ ರೆಡ್ಡಿ ಪತ್ನಿಯ ಘೋಷಿತ ಆಸ್ತಿ ₹250 ಕೋಟಿ

ಎಂಟಿಬಿ ನಾಗರಾಜ್‌ ಬಳಿ ₹1.72 ಕೋಟಿ ಮೌಲ್ಯದ ಕಾರುಗಳಿವೆ. ಅವರ ಹೆಸರಿನಲ್ಲಿ ಐ10, ಬೊಲೆರೊ, ಲ್ಯಾಂಡ್ ರೋವರ್ ಡಿವೆಂಡರ್ ವಾಹನಗಳಿದ್ದರೆ, ಅವರ ಪತ್ನಿ ಹೆಸರಲ್ಲಿ ಪೋರ್ಶ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿವೆ. ಪತ್ನಿ ಹೆಸರಿನಲ್ಲಿರುವ ಎರಡು ಕಾರುಗಳ ಮೌಲ್ಯ ₹1.33 ಕೋಟಿ ಮೌಲ್ಯವನ್ನು ಹೊಂದಿವೆ.

ಎಂಟಿಬಿ ನಾಗರಾಜ್‌ ₹71 ಕೋಟಿ ಸಾಲ ಮಾಡಿಕೊಂಡಿದ್ದು, ಅವರ ಪತ್ನಿ ₹27 ಕೋಟಿ ಸಾಲ ಮಾಡಿರುವುದಾಗಿ ತಮ್ಮ ಅಫಿಡವಿಟ್‌ನಲ್ಲಿ ಎಂಟಿಬಿ ನಾಗರಾಜ್ ಘೋಷಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

ದೇಶದ ಅಭಿವೃದ್ಧಿ ರಕ್ಷಣೆಗೆ 140 ಕೋಟಿ ಮಂದಿ ನರೇಂದ್ರ ಮೋದಿ ಮತ್ತೆ...

ಮಂಗಳೂರು | ಮಂದಿರದ ಬಳಿ ಬಿಜೆಪಿಯಿಂದ ಪ್ರಚಾರ: ಆಕ್ಷೇಪ ಎತ್ತಿದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಜಟಾಪಟಿ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಭಾಗದ ದೇವಸ್ಥಾನವೊಂದರ ಬಳಿ ಪ್ರಚಾರ ನಡೆಸುವ...

ರಾಯಚೂರು | ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕರನ್ನು ಭಾರೀ ಅಂತರದಿಂದ ಗೆಲ್ಲಿಸಿ: ಸಚಿವ ಬೋಸರಾಜು

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ ಅವರನ್ನು ಭಾರೀ ಅಂತರದಿಂದ...

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...