ಬಿಎಸ್ಪಿಯಿಂದ ಉಚ್ಛಾಟನೆ ಆದ ಬಳಿಕ ಬಿಜೆಪಿ ಸೇರಿರುವ ಶಾಸಕ ಎನ್ ಮಹೇಶ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅವರು ಮತ ಕೇಳಲು ಹೋದಲ್ಲೆಲ್ಲ ಮುಖಭಂಗ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ಎನ್ ಮಹೇಶ್ ವಿರುದ್ಧ ‘ಗೋ ಬ್ಯಾಕ್’ ಘೋಷಣೆ ಕೂಗುತ್ತ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಇರಸವಾಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎನ್ ಮಹೇಶ್ ಪ್ರಚಾರಕ್ಕೆ ಬಂದಾಗ ಡಾ. ಅಂಬೇಡ್ಕರ್ ಸಂಘದ ಯುವಕರು ‘ಗೋ ಬ್ಯಾಕ್ ಮಹೇಶ್’ ಘೋಷಣೆ ಕೂಗಿ ಪ್ರಚಾರ ನಡೆಸದಂತೆ ಗ್ರಾಮದಿಂದ ಹೊರಗೆ ಕಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆ ಯಳಂದೂರಿನ ಗಂಗವಾಡಿ ಗ್ರಾಮದಲ್ಲಿಯೂ ಅಲ್ಲಿನ ಮತದಾರರು ʼಗೋ ಬ್ಯಾಕ್ ಮಹೇಶ್ʼ ಘೋಷಣೆ ಕೂಗಿ ತಮ್ಮ ಪ್ರತಿರೋಧ ವ್ಯಕ್ತಪಸಿದ್ದರು. ಈ ರೀತಿ ಘಟನೆಗಳು ಹೋದಲ್ಲೆಲ್ಲ ಮರುಕಳಿಸುತ್ತಿದ್ದರು. ಬಿಜೆಪಿ ಅಭ್ಯರ್ಥಿ ಎನ್ ಮಹೇಶ್ ಅವರಿಗೆ ತೀವ್ರ ಮುಜುಗರ ತರಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಳ್ಳೇಗಾಲ | ಬಿಜೆಪಿ ಅಭ್ಯರ್ಥಿ ಎನ್ ಮಹೇಶ್ ವಿರುದ್ಧ ಗ್ರಾಮಸ್ಥರ ಆಕ್ರೋಶ