ರಾಜ್ಯಾದ್ಯಂತ ಮತದಾನ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮ ರಾಜ್ಯದ ಗಮನ ಸೆಳೆದಿದೆ. ಗ್ರಾಮದ ಬಹುತೇಕ ಮಹಿಳೆಯರು ಬಿಜೆಪಿ ಬೆಂಬಲಿಗರು ನೀಡಿದ್ದ ಸೀರೆ ಮತ್ತು ಕೋಳಿಯನ್ನು ಹಿಂದಿರುಗಿಸಿದ್ದಾರೆ.
ಕೆ.ಆರ್ ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ ನಾರಾಯಣಗೌಡ ಅವರಿಗೆ ಮತ ನೀಡುವಂತೆ ಬಿಜೆಪಿ ಮುಖಂಡರು ಗ್ರಾಮದ ಎಲ್ಲ ಮನೆಗಳಿಗೆ ಸೀರೆ ಮತ್ತು ಕೋಳಿಯನ್ನು ಹಂಚಿದ್ದರು ಎಂದು ತಿಳಿದುಬಂದಿದೆ.
ಗ್ರಾಮದ ಮಹಿಳೆಯರು ಮತದಾನಕ್ಕೂ ಮುನ್ನ ಬಿಜೆಪಿಗರು ನೀಡಿದ್ದ ಸೀರಿಯನ್ನು ವಾಪಸ್ ಎಸೆದು, ಕೋಳಿಯನ್ನು ಹಿಂದಿರುಗಿಸಿದ್ದಾರೆ. “ದಲಿತ ವಿರೋಧಿಯಾಗಿರುವ ಬಿಜೆಪಿಗೆ ಧಿಕ್ಕಾರ. ಬಿಜೆಪಿಗೆ ನಾವು ಮತ ಹಾಕುವುದಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ, ಗ್ರಾಮದ ಹಲವಾರು ಯುವಜನರು ‘ದಲಿತ ವಿರೋಧಿ ಬಿಜೆಪಿಗೆ ಧಿಕ್ಕಾರ, ನಾರಾಯಣಗೌಡನಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದ್ದಾರೆ.