ʻಲವ್‌ ಮಾಕ್‌ಟೇಲ್‌-3ʼ ಘೋಷಿಸಿದ ಡಾರ್ಲಿಂಗ್‌ ಕೃಷ್ಣ : ಬೇಡ ಗುರು ಸಾಕು ಎಂದ ಅಭಿಮಾನಿಗಳು

Date:

ಪ್ರೇಕ್ಷಕರನ್ನು ಲಘುವಾಗಿ ಪರಿಗಣಿಸಬೇಡಿ ಎಂದ ನೆಟ್ಟಿಗರು

ಅಭಿಪ್ರಾಯ ತಿಳಿಸಿದ್ದಕ್ಕೆ ಬ್ಲಾಕ್‌ ಮಾಡಿದ ಮಿಲನ ನಾಗರಾಜ್‌

ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಯುಗಾದಿ ಹಬ್ಬದ ಪ್ರಯುಕ್ತ ʼಲವ್‌ ಮಾಕ್‌ಟೇಲ್‌-3ʼ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಹೊಸ ಸಿನಿಮಾ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಖುಷಿಯಲ್ಲಿದ್ದ ನಟನಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದು, ಈ ಕತೆಯನ್ನು ನೀವು ಉದ್ಯೋಗ ಖಾತ್ರಿ ಯೋಜನೆ ಮಾಡಿಕೊಂಡಿದ್ದಿರೇನು ಎಂದು ಕಿಡಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಡಾರ್ಲಿಂಗ್‌ ಕೃಷ್ಣ ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ʼಲವ್‌ ಮಾಕ್‌ಟೇಲ್‌-3ʼ ಶೀರ್ಷಿಕೆಯ ಜೊತೆಗೆ ಯುಗಾದಿ ಹಬ್ಬದ ಶುಭಾಶಯದ ಸಂದೇಶವಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಅವರು ʼಲವ್‌ ಮಾಕ್‌ಟೇಲ್‌-3ʼ ಸಿನಿಮಾ ಘೋಷಿಸುತ್ತಲೇ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಡಾರ್ಲಿಂಗ್‌ ಕೃಷ್ಣ ಹೊಸ ಸಿನಿಮಾ ಘೋಷಣೆಗೆ ಪ್ರತಿಕ್ರಿಯಿಸಿರುವ ಇನ್‌ಸ್ಟಾಗ್ರಾಂ ಬಳಕೆದಾರ ಗಿರೀಶ್‌, ” ʼಲವ್‌ ಮಾಕ್‌ಟೇಲ್‌ʼ ಸಿನಿಮಾ ಮೇಲಿದ್ದ ಅಭಿಮಾನದಿಂದಾಗಿ ಜನ ʼಲವ್‌ ಮಾಕ್‌ಟೇಲ್‌-2ʼ ನೋಡಲು ಚಿತ್ರಮಂದಿರಗಳಿಗೆ ಬಂದರಷ್ಟೇ. ಹೂರಣವೇ ಇಲ್ಲದ ಕತೆಯನ್ನಿಟುಕೊಂಡು ʼಲವ್‌ ಮಾಕ್‌ಟೇಲ್‌-3ʼ ಮಾಡಲು ಹೊರಟಿದ್ದೀರಾ” ಎಂದು ವ್ಯಂಗ್ಯವಾಡಿದ್ದಾರೆ.

ʼಲವ್‌ ಮಾಕ್‌ಟೇಲ್‌-3ʼ ಘೋಷಣೆಯ ಬಗ್ಗೆ ತಿಳಿದ ಟ್ವಿಟರ್‌ ಬಳಕೆದಾರ ದೀಪಕ್‌ ಎಂಬುವವರು, ” ʼಲವ್‌ ಮಾಕ್‌ಟೇಲ್‌-3ʼ ಸಿನಿಮಾ ಮಾಡುವ ಯೋಜನೆಯನ್ನು ದಯವಿಟ್ಟು ನಿಲ್ಲಿಸಿ. ಇತ್ತೀಚೆಗೆ ನಿಮ್ಮ ಯಾವ ಸಿನಿಮಾಗಳು ಕೂಡ ಯಶಸ್ಸು ಕಂಡಿಲ್ಲ. ಪ್ರೇಕ್ಷಕರನ್ನು ಲಘುವಾಗಿ ಪರಿಗಣಿಸಬೇಡಿ. ಸಿನಿಮಾಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯ” ಎಂದು ಖಾರವಾಗಿಯೇ ಕಿವಿಮಾತು ಹೇಳಿದ್ದಾರೆ.

ಕೆಲವರು, “ಅತಿಯಾದರೆ ಅಮೃತವೂ ವಿಷ ಆಗುತ್ತದೆ” ಎಂದರೆ, ಇನ್ನು ಕೆಲವರು, “ಹೀಗೆ ಸರಣಿಗಳನ್ನು ಮಾಡಿ ಮೂಲ ʼಲವ್‌ ಮಾಕ್‌ಟೇಲ್‌ʼ ಚಿತ್ರದ ಹೆಸರನ್ನು ಹಾಳು ಮಾಡಬೇಡಿ” ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚಿತ್ರದ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದರೆ ಮಿಲನ ನಾಗರಾಜ್‌ ನಮ್ಮನ್ನು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್‌ ಮಾಡುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ.

2020ರಲ್ಲಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನ ನಾಗರಾಜ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಲವ್‌ ಮಾಕ್‌ಟೇಲ್‌ʼ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ಕೃಷ್ಣ ʼಲವ್‌ ಮಾಕ್‌ಟೇಲ್‌-2ʼ ಸಿನಿಮಾ ಮಾಡಿದರು. ಆದರೆ, ʼಲವ್‌ ಮಾಕ್‌ಟೇಲ್‌-2ʼ ನಿರೀಕ್ಷಿತ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಹೀಗಿರುವಾಗ ಕೃಷ್ಣ, ʼಲವ್‌ ಮಾಕ್‌ಟೇಲ್‌-3ʼ ಘೋಷಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೃಷ್ಣ ಮತ್ತು ಮಿಲನ ಜೋಡಿ ಈ ಗಿಮಿಕ್‌ಗಳನ್ನು ಬಿಟ್ಟು ಭಿನ್ನ ಕಥಾಹಂದರ ಮತ್ತು ಪಾತ್ರಗಳ ಮೂಲಕ ಗುರುತಿಸಿಕೊಳ್ಳಲಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...