ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

Date:

ಜಾವ ಐದರ ಗಳಿಗೆ ಸವಿಗನಸ ನಿದ್ದೆ
ಗೆಳತಿಯರ ಕೂಡಾಟ ನಿದ್ದೆಯಲೂ
ಕೇಕೆ ಕನವರಿಕೆ

ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿ
ಚುಳ್ಳನೇ ಚಳುಕೆದ್ದು
ನಿದ್ದೆಯಲೇ ನರಳಿದಳು
ಹದಿಮೂರರ ಪೋರಿ

ಅವ್ವನ ಎದೆ ಮೇಲೆ ಏರಿದ್ದ
ಕಾಲ ಸಂದುಗಳಿಂದ
ತಣ್ಣನೆಯ ಹರಿವು
ಬೆಚ್ಚಿ ಕಣ್ಣು ತೆರೆದಳು ಬಾಲೆ
ಒದ್ದೊದ್ದೆ ಉಡುಪು ಒಳಗೆಲ್ಲ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಓಡಿದಳು ಬಚ್ಚಲಿಗೆ
ಒಳಗೆಲ್ಲ ಕೆಂಪಾಗಿ
ಕಸಿವಿಸಿಯ ಎದೆ ಹೊತ್ತು
ಬಂದು ನಿಂತಳು ಹೆತ್ತವ್ವನೆದುರು

ತನ್ನ ಒಂಟಿ ಬದುಕಿನ ಸುತ್ತ
ಹರಿದಾಡೊ ಕಾಮುಕ ಕಣ್ಣುಗಳ
ಮೆಟ್ಟಿ ನಿಲ್ಲುವುದರಲ್ಲೇ
ಹೈರಾಣವಾಗಿದ್ದ ಅವ್ವ
ನಿದ್ದೆ ಮೆತ್ತಿದ ಕಣ್ಣ ತೆರೆದು
ದಿಂಬಿಗೆ ಮೊಗ ಒತ್ತಿ ಬಿಕ್ಕಿದಳು

ಧರ್ಮಶಾಸ್ತ್ರಕ್ಕೆ ಕೊರಳೊಡ್ಡಿ
ಕಟ್ಟಿಕೊಂಡವನು
ತನ್ನ ಒಳ-ಹೊರಗುಗಳ
ಹಕ್ಕಿನಲೇ ದೋಚಿ
ಎದೆಗೂಡ ಕನಸಿಗೆ ಕೆಂಡದ ಮಳೆ
ಸುರಿದು ಮಕರಂದವರಸಿ
ಹಾರಿಹೋದುದ ನೆನೆದು ಬಿಕ್ಕಿದಳು

ಕೊಟ್ಟವಳು ಕುಲಕೊರಗು
ಎಂದು ಹೊರಗಿಟ್ಟ
ಮನೆ ತುಂಬಿ ತುಳುಕುವ
ಅಣ್ಣ ತಮ್ಮರ ನೆನೆದು
ಬಿಕ್ಕಿದಳು

ಆಳಿಗೊಂದು ಕಲ್ಲೆಸೆದು
ಮೋಜಾಟ ಆಡುವ
ಕಾರುಣ್ಯ ಸತ್ತ ಸಮುದಾಯ
ನೆನೆದು ಬಿಕ್ಕಿದಳು

ಬಿಕ್ಕಿದಳು ಬಿಕ್ಕಿಯೇ ಬಿಕ್ಕಿದಳು
ಘಳಿಗೆಗೊಂದೊಂದು ನಿಟ್ಟುಸಿರ ಬಿಟ್ಟು

ಎಷ್ಟೋ ಸಮಯದ ಬಳಿಕ
ಅವ್ವ ಮೇಲೆದ್ದಳು
ಯುದ್ದಕ್ಕೆ ಸಜ್ಜಾದ ಯೋಧಳಂತೆ

ಬಿಟ್ಟ ನಿಟ್ಟುಸಿರನ್ನೆಲ್ಲ
ನಗುವಾಗಿ ಅರಳಿಸಿ
ಮೈ ದಡವಿ ಹೇಳಿದಳು
‘ನೀನು ದೊಡ್ಡವಳಾದೆ…’
ಹಾಲನ್ನ ನೀಡಿ ಹೂ ಮುತ್ತನಿಟ್ಟಳು

ಮನೆಯ ತುಂಬಿತ್ತು
ಋತುಮತಿಯ ಆರೈಕೆ, ಸಂಭ್ರಮ
ಕಾಸಿಗೆ ಕಾಸು ಜೋಡಿಸಿ
ತುಪ್ಪ, ಕೊಬ್ಬರಿ, ಚಿಗಳಿ, ಬೆಲ್ಲವ ತಂದು
ಹಾಲ್ಗಡಲಲ್ಲಿ ಮುಳುಗಿಸಿ
ಮೇಲೆತ್ತಿದಳು

ಮೊಗ್ಗ ಹೂವಾಗಿಸಿ
ಕಾದೇ ಕಾದಳು ಅವ್ವ
ಹೂತಿಟ್ಟ ನಿಧಿಯ
ಸರ್ಪ ಕಾದಂತೆ…

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಸತೀಶ್
ವಾಣಿ ಸತೀಶ್
ತುಮಕೂರು ಜಿಲ್ಲೆಯ ತಿಪಟೂರಿನವರು. ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ನೀನಾಸಂನಿಂದ ರಂಗ ಶಿಕ್ಷಣ. ಸದ್ಯ ತಿಪಟೂರಿನ 'ಭೂಮಿ ಥಿಯೇಟರ್' ಮತ್ತು 'ಶ್ರೀ ನಟರಾಜ ನೃತ್ಯಶಾಲೆ'ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...