- ಗಾಯಗೊಂಡ ರೌಡಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮೂವರು ಆರೋಪಿಗಳ ಬಂಧನ, ವಿಚಾರಣೆ
ಜೊತೆಯಲ್ಲಿಯೇ ಕುಡಿಯಲು ತೆರಳಿದ್ದ ಇಬ್ಬರು ರೌಡಿ ಶೀಟರ್ಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ಓರ್ವ ರೌಡಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತೋರ್ವ ರೌಡಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ಶ್ರೀಗಂಧ ಎಂಬಾತ ಮೈಸೂರು ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಗಾಯಗೊಂಡಿರುವ ಮತ್ತೋರ್ವ ರೌಡಿಯು ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದನು ಎನ್ನಲಾಗಿದೆ.
ಇಬ್ಬರು ರೌಡಿ ಶೀಟರ್ಗಳು ನಿನ್ನೆ ರಾತ್ರಿ ಜೊತೆಯಲ್ಲಿಯೇ ಕುಡಿಯಲು ತೆರದ್ದರು. ಕುಡಿದ ಮತ್ತಿನಲ್ಲಿ ಜಗಳ ಪ್ರಾರಂಭಿಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ, ಒಬ್ಬರಿಗೊಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ವೇಳೆ ಮೈಸೂರು ಕಾಕರವಾಡಿ ಬಡಾವಣೆಯ ನಿವಾಸಿ ಶ್ರೀಗಂಧ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕೊಲೆ ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಕೆ ಆರ್ ಪುರಂ ಠಾಣೆಯ ಪೊಲೀಸರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೌಡಿಶೀಟರ್ ರವಿ, ಘಟನೆಗೆ ಸಹಾಯ ಮಾಡಿದ್ದಾರೆ ಎನ್ನಲಾದ ಮುಜೀಬ್, ಹರೀಶ್ ಎಂಬುವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.