ಬೀದರ್ | ಪರುಷ ಕಟ್ಟೆ ಮೇಲೆ ನಂದಿ ಮೂರ್ತಿ ಕೂರಿಸಲು ಬಿಡೆವು: ಬಸವರಾಜ ಧನ್ನೂರ

Date:

  • ಬೀದರ್ ನಂದಿಗೂ ಪರುಷ ಕಟ್ಟೆಗೂ ಸಂಬಂಧವೇ ಇಲ್ಲ
  • ಪರುಷ ಕಟ್ಟೆ ಮೇಲೆ ನಂದಿ ಮರು ಸ್ಥಾಪಿನೆ ಭರವಸೆ ಸರಿಯಲ್ಲ

ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಪರುಷ ಕಟ್ಟೆ ಮೇಲೆ ಮತ್ತೆ ನಂದಿ ಮೂರ್ತಿ ಕೂರಿಸಲು ಬಿಡುವುದಿಲ್ಲ ಎಂದು ‘ರಾಷ್ಟ್ರೀಯ ಬಸವ ದಳ’ದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.

“ನಂದಿಗೂ ಪರುಷ ಕಟ್ಟೆಗೂ ಸಂಬಂಧವೇ ಇಲ್ಲ. ಹೀಗಾಗಿ, ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

“ಕೆಲವರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಜೀರ್ಣೋದ್ಧಾರ ಪ್ರಯುಕ್ತ ತೆರವುಗೊಳಿಸಲಾದ ನಂದಿ ಮೂರ್ತಿಯನ್ನು ಪರುಷ ಕಟ್ಟೆ ಮೇಲೆ ಮರು ಸ್ಥಾಪಿಸುವ ಭರವಸೆ ಕೊಟ್ಟಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬಿಜ್ಜಳ ರಾಜನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರು ಆಸ್ಥಾನಕ್ಕೆ ಹೋಗುವ ಮುನ್ನ ಪರುಷ ಕಟ್ಟೆ ಮೇಲೆ ಕೂರುತ್ತಿದ್ದರು. ಜನರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ಕಲ್ಪಿಸುತ್ತಿದ್ದರು. ಹೀಗಾಗಿ ಆ ಸ್ಥಳವನ್ನು ಜನರು ಪರುಷ ಕಟ್ಟೆಯೆಂದು ಕರೆದಿದ್ದಾರೆ” ಎಂದು ಹೇಳಿದ್ದಾರೆ.

ಬೀದರ್‌

“‌ಬೀದರ್‌ ಪರುಷ ಕಟ್ಟೆ ಮೇಲೆ ಮತ್ತೆ ನಂದಿ ಮೂರ್ತಿ ಪ್ರತಿಷ್ಠಾಪಿಸಿದರೆ ಬಸವಣ್ಣನವರಿಗೆ ಅವಮಾನ ಮಾಡಿದಂತಾಗುತ್ತದೆ. ಜತೆಗೆ, ಸ್ಪಷ್ಟವಾಗಿರುವ ಇತಿಹಾಸದ ಬಗ್ಗೆ ಗೊಂದಲ ಮೂಡಿಸಿದಂತೆಯೂ ಆಗುತ್ತದೆ. ಬಸವಣ್ಣನವರು ನಾಲ್ಕು ಕಾಲಿನ ಎತ್ತಲ್ಲ. ಕೆಳಗೆ ಬಿದ್ದವರು, ತುಳಿತಕ್ಕೆ ಒಳಗಾದವರು, ಅಸಹಾಯಕರು, ಧ್ವನಿ ಇಲ್ಲದವರು, ಶೋಷಿತರನ್ನು ಮೇಲಕ್ಕೆ ಎತ್ತಿ ಸಮಾಜದ ಮುಖ್ಯ ವಾಹಿನಿಗೆ ತಂದ ಮಹಾ ಪ್ರವಾದಿ. ಸಮ ಸಮಾಜದ ನಿರ್ಮಾಪಕ, ದಲಿತೋದ್ಧಾರಕ, ಚಾರಿತ್ರಿಕ- ಐತಿಹಾಸಿಕ ಯುಗಪುರುಷ. ಅವರಿಗೂ- ನಂದಿಗೂ ಥಳಕು ಹಾಕುವುದು ಸಲ್ಲದು” ಎಂದು ತಿಳಿದ್ದಾರೆ.

“12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಮಾನವೀಯತೆಗಾಗಿ ಮಹಾಕ್ರಾಂತಿ ನಡೆದಿತ್ತು. ಬಸವಣ್ಣನವರು ಜಗತ್ತಿಗೆ ಬೆಳಕು ನೀಡುವ ವಚನ ಸಾಹಿತ್ಯ ನೀಡಿದರು. ಪ್ರಜಾಪ್ರಭುತ್ವದ ಮೌಲ್ಯ ಕೊಟ್ಟರು. ಮೊಟ್ಟದ ಮೊದಲ ಬಾರಿಗೆ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ವಿಶ್ವದ ಮೊದಲ ಸಂಸತ್ ಎಂದೇ ಕರೆಯಲಾಗುವ ಅನುಭವ ಮಂಟಪ ನಿರ್ಮಿಸಿದರು” ಎಂದು ಶ್ಲಾಘಿಸಿದ್ದಾರೆ.

“ಪರುಷ ಕಟ್ಟೆಯ ಜೀರ್ಣೋದ್ಧಾರ ನಡೆಯುತ್ತಿರುವುದು ಸಂತಸದ ಸಂಗತಿ. ಚಾರಿತ್ರಿಕ ಮಹತ್ವ ಹೊಂದಿರುವ ಕಾರಣ ಅದಕ್ಕೆ ಸುಂದರ ಸ್ವರೂಪ ಕೊಡಬೇಕಾಗಿದೆ. ಆದರೆ, ಇಲ್ಲಿ ಹಿಂದೆ ಆದ ತಪ್ಪು ಮತ್ತೆ ಮರುಕಳಿಸಬಾರದು. ಮುಂದಿನ ಪೀಳಿಗೆಗೆ ಸರಿಯಾದ ಇತಿಹಾಸ ತಿಳಿಸಲು ಜೀರ್ಣೋದ್ಧಾರದ ಬಳಿಕ ಪರುಷ ಕಟ್ಟೆಯ ಮೇಲೆ ಬಸವಣ್ಣನವರು ಕುಳಿತ ಭಂಗಿಯ ಕಂಚಿನ, ಇಲ್ಲವೇ ಅಮೃತ ಶಿಲೆಯ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಬಸವೇಶ್ವರ ಮೂರ್ತಿಗೆ 5 ಲಕ್ಷ ರೂ. ದೇಣಿಗೆ ನೀಡಲು ಸಿದ್ಧ

ಬಸವಕಲ್ಯಾಣದ ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ರೂ. 5 ಲಕ್ಷ ದೇಣಿಗೆ ಕೊಡಲು ಸಿದ್ಧ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಾಸನ | ಮೂಲ ಸೌಕರ್ಯಗಳಿಗೆ ಆಗ್ರಹ; ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಹಾ ಮಾನವತಾವಾದಿ ಬಸವಣ್ಣನವರ ಮೂರ್ತಿಗಳು ಸ್ಥಾಪನೆಯಾಗುತ್ತಿವೆ. ದೇಶದ ಸಂಸತ್ತು, ವಿಧಾನಸೌಧದ ಮುಂಭಾಗದಲ್ಲೂ ಸ್ಥಾಪನೆಯಾಗಿವೆ. ಹೀಗಾಗಿ ಅವರ ಕಾರ್ಯ ಕ್ಷೇತ್ರದಲ್ಲಿ ನಿತ್ಯ ಜನರ ಅಹವಾಲು ಆಲಿಸುತ್ತಿದ್ದ ಪರುಷ ಕಟ್ಟೆ ಮೇಲೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎನ್ನುವುದು ಬಸವ ಭಕ್ತರ ಮಹದಾಸೆಯಾಗಿದೆ” ಎಂದು ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸಿದ್ದರಾಮಯ್ಯನವರ ₹2000 ಚುನಾವಣೆ ಇದಲ್ಲ: ವಿ ಸೋಮಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ₹2,000ದ ಚುನಾವಣೆ ಇದಲ್ಲ. ದೇಶದ ಭವಿಷ್ಯ ರೂಪಿಸುವ...

ಚಿತ್ರದುರ್ಗ | ಮತದಾನ ಪ್ರಮಾಣ ಹೆಚ್ಚಿಸಲು ವಾಕಥಾನ್ ಜಾಥಾ

ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ...

ವಿಜಯಪುರ | ಸ್ವಚ್ಚತೆ ಕಾಣದೆ ತುಂಬಿ ಹರಿಯುತ್ತಿವೆ ಚರಂಡಿ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಬಗೇರಿ,...

ಲೋಕಸಭಾ ಚುನಾವಣೆ | ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಕಾಂಗ್ರೆಸ್‌ ಸೇರುವ ಸಾಧ್ಯತೆ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಸಿದ್ದರಾಮಯ್ಯ...