- ಪೋಷಾಕು, ಟೋಪಿ ಧರಿಸಲು ನಿರಾಕರಿಸಿದ ಸಚಿವ
- ರಂಜಾನ್ ಸಭೆಯಲ್ಲಿ ಮುಜುಗರಕ್ಕೊಳಗಾದ ಸುಧಾಕರ್
ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ನಮಾಜ್ಗೆ ಆಗಮಿಸಿದ ಸಚಿವ ಡಾ. ಕೆ ಸುಧಾಕರ್ ವಿರುದ್ಧ ಮುಸ್ಲಿಂ ಬಾಂಧವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ದಿನ್ನೆಹೊಸಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ನಮಾಜ್ ಮಾಡುತಿದ್ದ ಸಂದರ್ಭದಲ್ಲಿ ಪ್ರತಿ ಬಾರಿ ಶಾಸಕ ಕೆ ಸುಧಾಕರ್ ಅವರು ಮುಸ್ಲಿಮರ ಟೋಪಿ ಹಾಕಿಕೊಂಡು ಪ್ರಾರ್ಥನೆಯಲ್ಲಿ ಬಾಗವಹಿಸುತಿದ್ದರು.
ಈ ಭಾರಿ ನಮಾಜ್ನಲ್ಲಿ ಭಾಗವಹಿಸಿ ಯಾವುದೇ ಪೋಷಾಕು, ಟೋಪಿ ಧರಿಸಲು ನಿರಾಕರಿಸಿದ್ದಾರೆ. ಸಚಿವರ ಈ ವರ್ತನೆಯಿಂದ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಅಕ್ಷೇಪಣೆಯನ್ನೂ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದರಿಂದ ಸುಧಾಕರ ಅವರಿಗೆ ಮುಜುಗರವೂ ಆಗಿದೆ. ನಂತರ ಬೆಂಬಲಿಗರು ಮತ್ತು ಕೆಲವು ಮುಸ್ಲಿಂ ಯುವಕರ ನಡುವೆ ವಾಗ್ವಾದ ನಡೆಯಿತು. ಬಳಿಕ ಮುಸ್ಲಿಂ ಮುಖಂಡರು ಎಲ್ಲರನ್ನೂ ಸಮಾಧಾನದಿಂದ ಇರುವಂತೆ ಕೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಭಾವೈಕ್ಯತೆಯಿಂದ ರಂಜಾನ್ ಆಚರಣೆ; ‘ಡಿವೈಎಫ್ಐ’ನಿಂದ ಪಾನಕ ವಿತರಣೆ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ನ ಅಭ್ಯರ್ಥಿ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಅಭ್ಯರ್ಥಿ ಕೆ ಪಿ ಬಚ್ಚೇಗೌಡ ಮುಸ್ಲಿಂ ಪೋಷಾಕು ಧರಿಸಿ ನಮಾಜ್ನಲ್ಲಿ ಭಾಗವಹಿದ್ದರು. ಟೋಪಿ ಧರಿಸಿದ್ದರಿಂದ ಇವರನ್ನು ಯಾರೂ ಆಕ್ಷೇಪಿಸಲಿಲ್ಲ, ವಿರೋಧಿಸಲಿಲ್ಲ. ಆದರೆ, ಸುಧಾಕರ್ ಅವರಿಗೆ ಮಾತ್ರ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ಮುಜುಗರಕ್ಕೀಡಾಗಿದ್ದರು.