ಬ್ಲಾಕ್ಮೇಲ್ ಅಥವಾ ಒತ್ತಡಕ್ಕೆ ಮಣಿದು ಜನಸಾಮಾನ್ಯರಿಗೆ ಸ್ಪದಿಸದೆ, ಕೆಲಸ ಮಾಡದೇ ಇರುವ ಅಧಿಕಾರಿಗಳು ಜಾಗ ಖಾಲಿ ಮಾಡಿ. ಜನರಿಗೆ ಅಗತ್ಯವಾಗಿ ಬೇಕಿರುವ ವಸತಿ, ರಸ್ತೆ ಹಾಗೂ ಸ್ಮಶಾನ ವ್ಯವಸ್ಥೆಯ ಬಾಕಿ ಉಳಿದಿರುವ ಕೆಲಸಗಳನ್ನು ಕೂಡಲೇ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚಳ್ಳಕೆರೆ ತಾಲೂಕು ಪಂಚಾಯತಿ ಕಚೇರಿಯಲ್ಲಿ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
“ನಾನು ಈ ಹಿಂದೆಯಿದ್ದ ಶಾಸಕನಲ್ಲ. ಇನ್ನು ಮುಂದೆ ನಾನು ನೀತಿ ಪಾಠ ಮಾಡುವುದಿಲ್ಲ. ಕೆಲಸಗಳಾಗಬೇಕಿರುವ ಹಲವಾರು ಪ್ರಕರಣಗಳು ಬಹಳ ದಿನಗಳಿಂದ ಬಾಕಿ ಇವೆ. ರೈತರು ಹಾಗೂ ಜನಸಾಮಾನ್ಯರು ಕಚೇರಿಗೆ ಅಲೆದಾಡುತ್ತಿದ್ದಾರೆ. ಅಂತಹ, ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಯಾರ ಒತ್ತಡ ಅಥವಾ ಬ್ಲಾಕ್ ಮೇಲ್ಗೆ ಒಳಗಾಗದೆ ಪಕ್ಷಬೇದ ಮರೆತು ಕೆಲಸ ಮಾಡಿಕೊಡಬೇಕು” ಎಂದು ಸೂಚಿಸಿದರು.