ಕಲಬುರಗಿ ಜಿಲ್ಲೆ ಜೇವರ್ಗಿ ಪುರಸಭೆಯ ಹೊರಗುತ್ತಿಗೆ ನೌಕರರಿಗೆ ಅನೇಕ ವರ್ಷಗಳಿಂದ ವೇತನ, ಇಪಿಎಫ್, ಇಎಸ್ಐ ಹಾಗೂ ಇತರೆ ಮೂಲ ಸೌಕರ್ಯಗಳಲ್ಲಿ ತಾರತಮ್ಯವಾಗುತ್ತಿದ್ದು, ಸರ್ಕಾರದ ಆದೇಶದಂತೆ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ನೌಕರರು ಪುರಸಭೆ ಕಚೇರಿ ಎದುರು ಧರಣಿ ನಡೆಸಿದರು.
ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರಿಗೆ ಹಲವು ವರ್ಷಗಳಿಂದ ಇಪಿಎಫ್, ಇಎಸ್ಐ ನಮ್ಮ ಹೆಸರಿಗೆ ಜಮೆ ಆಗಿಲ್ಲ. ಹಿಂದಿನ ಮತ್ತು ಈಗಿನ ಮುಖ್ಯಾಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಅಧಿಕಾರಿಗಳು ಭರವಸೆ ನೀಡುತ್ತಾ ಬಂದಿದ್ದಾರೆ. ಆದರೆ, ಇಲ್ಲಿಯವರೆಗೆ ಜಮೆ ಆಗಿಲ್ಲ. ಇದರಿಂದ ನೌಕರರಲ್ಲಿ ಆತಂಕ ಉಂಟಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸರ್ಕಾರದಿಂದ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು ಎಂದು ಅಗ್ರಹಿಸಿದರು.
ಹಕ್ಕೊತ್ತಾಯಗಳು
- ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ 10 ತಿಂಗಳ ವೇತನ ಶಿಕ್ಷಣ ನೀಡಬೇಕು.
- ಪುರಸಭೆ ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಆದೇಶದಂತೆ (ಪಿ.ಎಸ್.ಆರ್) ಪ್ರತಿ ತಿಂಗಳ 5ನೇ ತಾರಿಕಿನ ಒಳಗೆ ವೇತನ ಪಾವತಿಸಬೇಕು.
- ಇಪಿಎಫ್, ಇಎಸ್ಐ ಪ್ರತಿ ತಿಂಗಳು ನೌಕರರ ಹೆಸರಿಗೆ ಜಮೆ ಮಾಡಬೇಕು.
- ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಡರ್ಗಳನ್ನು ಖಾಯಂಗೊಳಿಸಬೇಕು.
- ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಹಿತದೃಷ್ಟಿಯಿಂದ ಕುಂಟುಬಸ್ಥರೆಲ್ಲರ ಹೆಸರಿಗೆ ಇಎಸ್ಐ ಕಾರ್ಡ್ ನೀಡಬೇಕು.
- ಹೊರಗುತ್ತಿಗೆ ನೌಕರರ ಸಮವಸ್ತ್ರ ಕಡ್ಡಾಯವಾಗಿ ಕೊಡಬೇಕು.
- ಇಲಾಖೆಯಲ್ಲಿ ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದುದ್ದರಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು, ಕೂಡಲೇ ಹೆಚ್ಚಿನ ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಬೇಕು.
- ಹೊರಗುತ್ತಿಗೆ ನೌಕರರಿಗೆ ಈಗಾಗಲೇ ನೀಡುತ್ತಿರುವ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲದ್ದರಿಂದ ವೇತನ ಹೆಚ್ಚಿಸಬೇಕು ಎಂದು ಆಗ್ರಹಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ-ಆರ್ಎಸ್ಎಸ್ ಹುಟ್ಟಿನಿಂದಲೇ ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿಗಳು: ಸಿದ್ದರಾಮಯ್ಯ
ಧರಣಿಯಲ್ಲಿ ಸಿದ್ರಾಮ್ ಕಟ್ಟಿ, ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಮಹೇಶ್ ಕೋಕಿಲೆ, ಮಲ್ಲಿಕಾರ್ಜುನ ಕೆಲ್ಲೂರ, ಅಶೋಕ ಹರವಾಳ, ಶಿವಶರಣಪಾ ಆಂದೋಲಾ, ಪರಮಾನಂದ ಯಲಗೋಡ, ದೌಲಪ್ಪಾ ಮದನ್, ದಾವಲಮಲೀಕ ಪ್ರಭುಲಿಂಗಯ್ಯ ಗಣಚಾರಿ, ಮನ್ಸೂರ ಪಟೇಲ, ಶಿವಕುಮಾರ ಸ್ವಾಮಿ, ಕಾಮಣ್ಣ ಪೂಜಾರಿ, ಸಾಯಬಣ್ಣ ಖಾದ್ಯಾಪೂರ, ಅಭಿಷೇಕ ನಂದಿ ಸುಪರ್ವೈಜರ್, ಭಗವಾನ ದೊಡ್ಡನಿ ಲೋಡರ್, ಬಸವರಾಜ ಧನ್ನಾಕರ್ ಲೋಡರ್, ಷಣ್ಮುಖಪ್ಪ ಕೋಳಕೂರ, ಮಲ್ಲಿನಾಥ ಹೆಗಡೆ ಸುಪರ್ ವೈಜರ್, ಧರ್ಮರಾಜ ಕುರಡೆಕರ್, ಸಾಯಿಕುಮಾರ ಡುಗನಕರ್, ಮಲ್ಲಿಕಾರ್ಜುನ, ಗಂಗಾರಾಮ ಯಮನಪ್ಪ, ಮಾನಪ್ಪ ಶಿಲ್ಪಿ, ಜಕುಮಾರ ನಂದಿ, ಮಲ್ಲಪ್ಪ ಜವಳಗಿ ಹಾಗೂ ಇತರರು ಭಾಗವಹಿಸಿದ್ದರು.