ರಾಯಚೂರು ಜಿಲ್ಲೆಯ ಮಮದಾಪುರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಪಂಚಾಯಿತಿ ಕಚೇರಿ ಎದುರು ಗ್ರಾಮೀಣ ಕೂಲಿಕಾರರ ಸಂಘ (ಗ್ರಕೂಸ) ಪ್ರತಿಭಟನೆ ನಡೆಸಿದೆ.
ಮಮದಾಪೂರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವೇಳೆ ಗ್ರಾಕೂಸ ಮುಖಂಡರಾದ ಮಾರೆಮ್ಮ ನೀರಮಾನ್ವಿ ಅವರು ‘ಈದಿನ.ಕಾಮ್’ ಜೊತೆಗೆ ಮಾತನಾಡಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಭಾಗದ ಕೂಲಿ ಕಾರ್ಮಿಕರಿಗೆ ಕೆಲಸ ಮಾಡಿದ ಕೂಲಿ ಹಣ ಪಾವತಿಯಾಗಿಲ್ಲ ಹಾಗೂ ಕೂಲಿ ಮಾಡಿದ ನಾಗೇಶ್ ಗುಂಪಿಗೆ 20 ಮಂದಿಗೆ 160 ರೂಪಾಯಿಯಂತೆ ಕೂಲಿ ಹಣ ಪಾವತಿ ಮಾಡಿರುತ್ತಾರೆ. ಉಳಿದ 149 ರೂಪಾಯಿ ಕೂಲಿ ದಂಡದ ರೂಪದಲ್ಲಿ ಪಾವತಿ ಮಾಡಬೇಕು ಎಂದು ಹೇಳಿದರು.
ನೆಲಹಾಳ ಗ್ರಾಮದಲ್ಲಿ 24 ಮಂದಿ ಕೂಲಿ ಕಾರ್ಮಿಕರ 15 ದಿನ ಎನ್ಎಂಆರ್ ಜೀರೋ ಆಗಿದೆ ಇದು ಕೂಡ ಕೂಲಿ ಹಣದ ದಂಡದ ರೂಪದಲ್ಲಿ ಪಾವತಿ ಮಾಡಬೇಕು. ನರೇಗಾ ಯೋಜನೆ ಅಡಿಯಲ್ಲಿ ಬರುವ ದನದ ಶೆಡ್ಡುಗಳು, ಬಿಓಸಿ ಹಣ, ಹೊಸ ಜಾಬ್ ಕಾರ್ಡ್, ಇನ್ನಿತರ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಎಂಟು ಜಿಲ್ಲೆಗಳಿಗೆ ಸಿಗದ ಸಚಿವ ಸ್ಥಾನದ ಪ್ರಾತಿನಿಧ್ಯ
ಪಂಚಾಯಿತಿ ಅಧಿಕಾರಿಗಳು ಮೂರು ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಉಮೇಶ್, ಶಂಕರಪ್ಪ, ರಾಮು ಮಂದಕಲ್ ಹಾಗೂ ಇತರರು ಹಾಜರಿದ್ದರು.