- ಶಿಕ್ಷಕರ ಕೊರತೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ್ ಕೊನೆಯಲ್ಲಿದೆ
- ಕೋರ್ಟ್, ಕೆಎಟಿ ಸಮಸ್ಯೆಗೆ ಸೂಕ್ತ ದಾಖಲೆ ನೀಡಿ ಸರ್ಕಾರ ಇತ್ಯರ್ಥಪಡಿಸಲಿ
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2022ರ ವಿಳಂಬ ಧೋರಣೆ ಖಂಡಿಸಿ ಜಿಪಿಎಸ್ಟಿಆರ್ ಅಭ್ಯರ್ಥಿಗಳು ಔರಾದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ 15 ಸಾವಿರ ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಈ ಪೈಕಿ 4,193 ಅರ್ಹ ಅಭ್ಯರ್ಥಿಗಳು ದೊರಕಿದ್ದು, ಸರ್ಕಾರ 2023ರ ಫೆ.1 ರಂದು ರಾಜ್ಯ ಪತ್ರ ಹೊರಡಿಸಿ, ಪೂರ್ವನ್ವಯ ಮಾಡಲಾಗಿದೆ ಎಂದು ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದರು. ನ್ಯಾಯಲಯದಲ್ಲಿ ಇತ್ತೀಚಿಗೆ ಆ ಪ್ರಕಣ ಇತ್ಯರ್ಥವಾಗಿದೆ. ಸದ್ಯಕ್ಕೆ ಯಾವುದೇ ಅಡೆ ತಡೆ ಇಲ್ಲ. ಆದರೆ, ಸರ್ಕಾರ ನೇಮಕಾತಿ ವಿಳಂಬ ಮಾಡುತ್ತಿದೆ ಇದರಿಂದ ಅಭ್ಯರ್ಥಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.
ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಯಲ್ಲಿ ನೇಮಕವಾಗಿದರಿಂದ ಅವರನ್ನು ಖಾಸಗಿ ಶಾಲೆಯಿಂದ ಬಿಡುಗಡೆಗೊಳಿಸಿದ್ದಾರೆ. ಯಾರೂ ಕೆಲಸ ಕೊಡುತ್ತಿಲ್ಲ ಅಭ್ಯರ್ಥಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಿಕ್ಷಕರ ಕೊರತೆಯಿಂದ ಕಳೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ ಹಳ್ಳಿಗಳಲ್ಲಿ ಶಿಕ್ಷಕರ ಕೊರತೆ ಅನೇಖ ವರ್ಷಗಳಿಂದ ಇದ್ದು, ಮಕ್ಕಳು ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿದೆ. ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಶಾಸಕರ ಜೊತೆಗೆ ಟೋಲ್ ಸಿಬ್ಬಂದಿ ಏಕವಚನದಲ್ಲಿ ವಾಗ್ವಾದ
ಕೂಡಲೇ ಪೂರಕ ಮಾಹಿತಿ ನೀಡುವ ಮೂಲಕ ಕೆ.ಎ.ಟಿ ಯಲ್ಲಿನ ನೇಮಕಾತಿಗೆ ಸಂಭಂದಿಸಿದ ಸಮಸ್ಸೆಯನ್ನು ಬಗೆಹರಿಸಿ ಕೂಡಲೇ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೇಮಕ ಮಾಡಿಕೊಳ್ಳಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದರು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೋರ್ಟ್ ಅಥವಾ ಕೆಎಟಿ ಯಲ್ಲಿನ ಸಮಸ್ಯೆಗೆ ಸೂಕ್ತ ದಾಖಲೆ ನೀಡಿ ಸರ್ಕಾರ ಇತ್ಯರ್ಥಪಡಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಶಿಕ್ಷಕರ ಕೊರತೆ ಇದ್ದು ಆದಷ್ಟು ಬೇಗ 15 ಸಾವಿರ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೋಳಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಉಮೇಶ ಧನೆ, ಶ್ರದ್ಧಾ ಹಾಗೂ ಇತರರಿದ್ದರು.