ಚಾಲನೆ ಮಾಡುತ್ತಿರುವಾಗಲೇ ಸರ್ಕಾರಿ ಬಸ್ನ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಬಸ್ ಪೆಟ್ರೋಲ್ ಬಂಕಿಗೆ ನುಗ್ಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕಂಡಕ್ಟರ್ನ ಸಮಯ ಪ್ರಜ್ಞೆಯಿಂದ ಅಪಾಯ ತಪ್ಪಿದೆ.
ಮರಿಗೆಪ್ಪ ಅಥಣಿ ಮೃತ ಚಾಲಕ. ಅವರು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಚಾಲಕನಾಗಿದ್ದರು. ಕಲಬುರಗಿ ಜಿಲ್ಲೆಯ ಅಪ್ಜಲ್ಪುರದಿಂದ ವಿಜಯಪುರ ಮಾರ್ಗದ ಬಸ್ ಚಾಲಕನಾಗಿ ಮಂಗಳವಾರ ಕೆಲಸಕ್ಕೆ ಹೋಗಿದ್ದರು. ಅಪ್ಜಲ್ಪುರದಿಂದ ವಿಜಯಪುರಕ್ಕೆ ಬಸ್ ತೆರಳುವಾಗ ಸಿಂದಗಿ ಬಳಿ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಅದೃಷ್ಟವಶಾತ್, ಘಟನೆಗೂ ಮುನ್ನವೇ ಬಸ್ನ ಹೆಡ್ಲೈಟ್ ಸಮಸ್ಯೆಯಾಗಿತ್ತು. ಆದ್ದರಿಂದ, ಪ್ರಯಾಣಿಕರನ್ನು ಮಾರ್ಗ ಮಧ್ಯೆ ಇಳಿಸಿ, ಬಸ್ ಸಿಂದಗಿ ಡಿಪೋಗೆ ಹೊರಟಿತ್ತು. ಈ ವೇಳೆ, ಮುರಿಗಪ್ಪ ಮೃತಪಟ್ಟಿದ್ದು, ಬಸ್ ಪೆಟ್ರೋಲ್ ಬಂಕ್ಗೆ ನುಗ್ಗಿದೆ.
ಕೂಡಲೇ ಬಸ್ನ ನಿರ್ವಾಹಕ ಶರಣು ಟಾಕಳಿಮ ಬಸ್ನ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.