ಗದಗ | ವಿಶ್ವಕರ್ಮ ಜಯಂತಿ ಆಚರಣೆ ನಮ್ಮೆಲ್ಲರಿಗೂ ಪ್ರೇರಣೆ ಆಗಲಿ: ಸಚಿವ ಎಚ್.ಕೆ ಪಾಟೀಲ್

Date:

ಮನುಷ್ಯನ ಬದುಕನ್ನು ಸುಂದರವಾಗಿಸೋ ಸಮುದಾಯ ವಿಶ್ವಕರ್ಮ ಸಮುದಾಯ. ದೇವಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆ ನಮ್ಮೆಲ್ಲರಿಗೂ ಪ್ರೇರಣೆ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ ಪಾಟೀಲ್ ಹೇಳಿದರು.

ಗದಗದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮನುಷ್ಯನ ವಿಕಸನ ಆಗಿದ್ದೆಲ್ಲ ವಿಶ್ವಕರ್ಮರಿಂದ. ಒಳ್ಳೆಯದನ್ನು ಕಾಣಿಸಬೇಕು, ಗ್ರಹಿಸಬೇಕು, ಸೂಕ್ಷ್ಮ ಇದ್ದದನ್ನು ಕಾಣಿಸಬೇಕು, ಆನಂದಿಸಬೇಕು ಇವುಗಳು ಸಾಧ್ಯವಾಗುವದು ವಿಶ್ವಕರ್ಮರಿಂದ ಮಾತ್ರ. ಬಡಿಗ, ಕಮ್ಮಾರ, ಶಿಲ್ಪಿ, ಕಂಬಾರ, ಅಕ್ಕಸಾಲಿಗರುಗಳು ಮಾಡುವ ಕೆಲಸದಿಂದಲೇ ಇಂದು ನಾಗರಿಕ ಸಮಾಜ ಸುಂದರವಾಗಿ ಕಾಣುವಂತೆ ಸಾಧ್ಯವಾಗಿದೆ. ನಮ್ಮ ನಾಗರಿಕ ಬದುಕು ಸುಂದರವಾಗಿ ಕಾಣುವಲ್ಲಿ ಪ್ರತಿಯೊಂದು ಹಂತದಲ್ಲಿ ವಿಶ್ವಕರ್ಮರ ಶ್ರಮ ಅಡಗಿರುತ್ತದೆ” ಎಂದರು.

“ಅಕ್ಕಸಾಲಿಗರು ಮಾಡುವಂತಹ ಆಭರಣಗಳ ವಿನ್ಯಾಸದ ಕೆಲಸದಿಂದಾಗಿ ನಮ್ಮ ನಾಗರಿಕರನ್ನು, ವಿಶೇಷವಾಗಿ ಮಹಿಳೆಯರನ್ನು ಸಂತುಷ್ಟರನ್ನಾಗಿಸುತ್ತದೆ. ಇತಿಹಾಸ ಅವಲೋಕನೆ ಶಿಲ್ಪಿಯ ಕೆಲಸದಿಂದ ಮಾತ್ರ ಸಾಧ್ಯವಾಗಿದ್ದು, ಶಿಲ್ಪಿಗಳು ಕೆತ್ತಿದ ನಾನಾ ಶಾಸನಗಳು ಹಾಗೂ ಸ್ಮಾರಕಗಳಿಂದ ಇಂದು ನಾವು ಇತಿಹಾಸ ಅಧ್ಯಯನ ಮಾಡಲು ಸಾಧ್ಯವಾಗಿದೆ. ನಮ್ಮತನವನ್ನು ನಮಗೆ ತೋರಿಸುವಲ್ಲಿ ಶಿಲ್ಪಿಯ ಪಾತ್ರ ಮಹತ್ವದಾಗಿದ್ದು ತಾವೆಲ್ಲರೂ ಇತಿಹಾಸಕಾರರಾಗಿದ್ದಿರಿ” ಎಂದು ತಿಳಿಸಿದರು.

“ಕುರ್ತಕೋಟಿಯಲ್ಲಿ ವಿಶ್ವಕರ್ಮರಿಗೆ ಕೌಶಲ್ಯಭಿವೃದ್ಧಿಗಾಗಿ ವಿಶೇಷ ಯೋಜನೆ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೇ ಗ್ರಾಮೀಣ ಮಟ್ಟದಲ್ಲಿ ವಿಶ್ವಕರ್ಮರಿಗೆ ಉಪಯುಕ್ತವಾಗುವಂತಹ ದೊಡ್ಡ ಯೋಜನೆ ಇದಾಗಿದ್ದು ಶೀಘ್ರವೇ ಈ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಗುವದು. ಬರುವ ದಿನಗಳಲ್ಲಿ ಇದೊಂದು ಉಪಯುಕ್ತ ಕೇಂದ್ರವಾಗಲಿದೆ. ಮನುಷ್ಯ ಬದುಕಿನಲ್ಲಿ ನಿಮ್ಮ ಈ ಸೃಷ್ಠಿಯಿಂದ ಹೆಚ್ಚು ಜನರÀ ಬದುಕನ್ನು ಸುಂಸಕೃತರನ್ನಾಗಿಸುವ, ಸುಂದರವನ್ನಾಗಿಸುವ ಹಾಗೂ ನಮ್ಮತನವನ್ನು ಉಳಿಸಿಕೊಳ್ಳಲು ತುಂಬಾ ಸಹಕಾರಿಯಾಗಲಿದೆ. ಅಲ್ಲದೇ ಗದಗ ನಗರದಲ್ಲಿ ವಿಶ್ವಕರ್ಮ ವೃತ್ತ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದ್ದು ಮುಂದಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ವಿಶ್ವಕರ್ಮ ನೂತನ ವೃತ್ತದಿಂದಲೇ ಚಾಲನೇ ನೀಡಲಾಗುವುದು” ಎಂದು ಸಚಿವ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಡಿ.ಕಡ್ಲಿಕೊಪ್ಪ, ವೀರಭದ್ರಪ್ಪ ಕಮ್ಮಾರ, ಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಡಿ.ವೈ.ಎಸ್.ಪಿ. ಸಂಕದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗದಗ ಜಿಲ್ಲಾ ವಿಶ್ವಕರ್ಮ ಮಹಸಭಾ ಜಿಲ್ಲಾಧ್ಯಕ್ಷರಾದ ದೇವೆಂದ್ರಪ್ಪ ಬಡಿಗೇರ, ಗಣ್ಯರಾದ ಬಿ.ಬಿ.ಅಸೂಟಿ ಸೇರಿದಂತೆ ವಿಶ್ವಕರ್ಮ ಸಮಾಜದ ಜಿಲ್ಲಾ ಹಾಗೂ ತಾಲೂಕು ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಬಾಲಕ; ಪ್ರಕರಣ ಮುಚ್ಚಿಹಾಕುವ ಹುನ್ನಾರ?

ಅಪ್ರಾಪ್ತೆ ಮೇಲೆ ಅಪ್ರಾಪ್ತ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ದುರ್ಘಟನೆ ಗದಗ ಜಿಲ್ಲೆಯ...

‌ಗದಗ | ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ಸಭೆ

ಕಾವೇರಿ ನೀರು ಸಂಕಷ್ಟ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ...

ಗದಗ | ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಎಸ್‌ಎಫ್‌ಐ ಆಗ್ರಹ

ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ)...

ಗದಗ | ನೀರು ಪಾಲಾದ ಬಾಲಕರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ

ಗದಗ ನಗರದ ರಹಮತ್ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿರುವ ಹೊಂಡದಲ್ಲಿ ಮುಳುಗಿ...