- ಜಗಳ, ಗಲಾಟೆ ನಡೆದಾಗ ತಕ್ಷಣ ಸಹಾಯವಾಣಿ 112ಗೆ ಸಂಪರ್ಕಿಸಿ
- ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಎಸ್ಪಿ ಸೂಚನೆ
ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮರ್ಪಕವಾದ ಪೊಲೀಸ್ ವ್ಯವಸ್ಥೆ ಇರಬೇಕು ಸಿಬ್ಬಂದಿ ದಕ್ಷ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುವಾಗ ಮಾತ್ರ ಸಮಾಜದಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಹೇಳಿದರು.
ಬೀದರ ಜಿಲ್ಲಾ ಪೊಲೀಸ್ ಮತ್ತು ಭಾಲ್ಕಿ ಉಪ-ವಿಭಾಗ ವತಿಯಿಂದ ಔರಾದ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಪರಾಧ ಪ್ರಕರಣ ತಡೆಗೆ ಇಲಾಖೆ ಕಟ್ಟು-ನಿಟ್ಟಿನ ಹೆಜ್ಜೆ ಇಡಲು ಸಾರ್ವಜನಿಕರು ಸಹಕರಿಸಿದ್ದಲ್ಲಿ ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಎಲ್ಲೆಡೆ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮನೆಗಳಿಗೂ ಸಿ.ಸಿ ಟಿವಿ ಕ್ಯಾಮರಾ ವ್ಯವಸ್ಥೆ ಇದ್ದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ. ಜಗಳ, ಗಲಾಟೆ ನಡೆದಾಗ ತಕ್ಷಣ ಸಹಾಯವಾಣಿ 112 ಗೆ ಸಂಪರ್ಕಿಸಿದರೆ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಹಾಜರಾಗಿ ಕೊರಿರುವ ಸಹಾಯವನ್ನು ನೀಡುವರು ಎಂದು ಮಾಹಿತಿ ನೀಡಿದರು.
ಈ ಸುದ್ದಿಓದಿದ್ದೀರಾ? ವಿಜಯಪುರ | ಗ್ರಾ.ಪಂನಲ್ಲಿ ಅವ್ಯವಹಾರ ಆರೋಪ; ತನಿಖೆಗೆ ಆಗ್ರಹ
ಬೀದರ, ಬಸವಕಲ್ಯಾಣ, ಹುಮನಾಬಾದದಲ್ಲಿ ಆಟೋ ನೊಂದಣಿ ಅಭಿಯಾನ ನಡೆಸಿದ್ದು, ಔರಾದ್ನಲ್ಲೂ ಆಟೊ ಚಾಲಕರಿಗೆ ಪ್ರತ್ಯೇಕವಾದ ಸಂಖ್ಯೆ ನೀಡಲಾಗುವುದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಭಾಲ್ಕಿ ಎ.ಎಸ್ಪಿ ಪೃಥ್ವಿಕ ಶಂಕರ , ಔರಾದ ಸಿಪಿಐ ಮಲ್ಲಿಕಾರ್ಜುನ ಸೇರಿದಂತೆ ದಸಂಸ ಮುಖಂಡ ಧನರಾಜ ಮುಸ್ತಾಪೂರೆ, ಕರವೇ ಮುಖಂಡ ಅನಿಲ ಹೆಡೆ ಹಾಗೂ ಪಟ್ಟಣದ ಮುಖಂಡರು ಭಾಗವಹಿಸಿದ್ದರು.