ರಾಮನಗರ ಜಿಲ್ಲೆಯ ಕನಕಪುರದಿಂದ ಕಬ್ಬಾಳು ಗ್ರಾಮಕ್ಕೆ ಸಂಪರ್ಕ ಕಲ್ಲಿಸುವ ರಸ್ತೆಯಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಪದೇ ಪದೆ ಅಪಘಾತಗಳು ಸಂಭಿಸುತ್ತಿದ್ದು, ಅಪಘಾತ ವಲಯವಾಗಿದೆ.
ಕಬ್ಬಾಳು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತಾವರೆಕೆರೆ ಬಳಿ ಒಂದು ತಿರುವಿದೆ. ತಿರುವಿನ ಒಂದು ಬದಿಯಲ್ಲಿ ಆಳವಾದ ಬಾವಿಯಿದ್ದರೆ, ಮತ್ತೊಂದು ಬದಿಯಲ್ಲಿ ಕೆರೆಯಿದೆ. ತಡೆಗೋಡೆ ಇಲ್ಲದ ಪರಿಣಾಮ ತಿರುವಿನಲ್ಲಿ ಅಪಘಾತಗಳು ಸಂಭವಿಸುತ್ತಿವೆ.
“ಬೆಂಗಳೂರಿನಿಂದ ಇದೇ ಮಾರ್ಗವಾಗಿ ಕಬ್ಬಾಳಮ್ಮ ದೇಗುಲಕ್ಕೆ ಭಕ್ತರು ಬರುತ್ತಾರೆ. ಅವರಿಗೆ ಇಲ್ಲಿ ತಿರುವ ಇರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ವೇಗವಾಗಿ ಬಂದು ಕೆರೆಗೆ ಇಲ್ಲವೆ ಬಾವಿಗೆ ಬಿದ್ದು ಅಪಘಾತಕ್ಕೆ ಈಡಾಗುತ್ತಿದ್ದಾರೆ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ನ ಹತ್ಯೆ
“ರಸ್ತೆಯಲ್ಲಿ ತಿರುವ ಇರುವ ಬಗ್ಗೆ ಒಂದು ಕಿಲೋ ಮೀಟರ್ ಮುಂದೆ ಮುಂಜಾಗ್ರತಾ ಸೂಚನಾ ಫಲಕ ಹಾಕಬೇಕು ಮತ್ತು ತಿರುವುಗಳಲ್ಲಿ ಎರಡೂ ಕಡೆ ಕಂದಕ ಇರುವುದರಿಂದ ತಡೆಗೋಡೆ ನಿರ್ಮಿಸಿ ಅಪಘಾತ ತಪ್ಪಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.