ಶಿವಮೊಗ್ಗ ಹೊರವಲಯದ ಹರಕೆರೆಯ ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿ ಮರಗಳನ್ನು ಕಡಿಯಲು ಶಿವಮೊಗ್ಗ ಅರಣ್ಯ ಇಲಾಖೆ ಅನುಮತಿ ನೀಡಿದೆ. ಇದನ್ನು ಹಲವರು ವಿರೋಧಿಸಿದ್ದಾರೆ. ಇಲಾಖೆಯು ಅನುಮತಿ ನೀಡುವ ಮುನ್ನ ಕಾನೂನಿನಲ್ಲಿ ಸೂಚಿಸಿರುವಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-169)ಯನ್ನು ವಿಸ್ತರಿಸಿ, ಚತುಷ್ಪಥ ರಸ್ತೆ ಮಾಡಲು ಯೋಜಿಸಲಾಗಿದೆ. ಅದಕ್ಕಾಗಿ ರಸ್ತೆ ಬದಿಯ 60 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಈ ಬೆನ್ನಲ್ಲೇ, ಹರಕೆರೆಯಲ್ಲಿ ಕೆಲ ಮರಗಳು ನೆಲಕ್ಕುರುಳಿದ್ದು, ಸ್ಥಳೀಯರು ಪರಿಸರ ಪ್ರೇಮಿಗಳಿಗೆ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಮೂಲದ ‘ನೇಚರ್ ಕನ್ಸರ್ವೇಶನ್ ಟ್ರಸ್ಟ್ ಮತ್ತು ಗ್ರೀನ್ ಲೈವ್ಸ್’ನ ಮುಖಂಡರು ಮರ ಕಡಿಯುವುದನ್ನು ಕೂಡಲೇ ನಿಲ್ಲಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
“ರಸ್ತೆ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಅನುಕೂಲ ಮಾಡಿಕೊಡಲು ಅರಣ್ಯ ಇಲಾಖೆ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಮರ ಕಡಿಯುವ ಅಧಿಸೂಚನೆಯನ್ನು ನಿಗದಿತ ಪತ್ರಿಕೆಗಳಲ್ಲಿ ಪ್ರಕಟಿಸಿಲ್ಲ” ಎಂದು ಗ್ರೀನ್ ಲೈವ್ಸ್ನ ಶ್ರವಣ್ ಎಂ.ಸಿ ಕಿಡಿಕಾರಿದ್ದಾರೆ.
ಆರೋಪಗಳನ್ನು ನಿರಾಕರಿಸಿರುವ ಡಿಸಿಎಫ್ (ಶಿವಮೊಗ್ಗ ಪ್ರಾದೇಶಿಕ ವಿಭಾಗ) ಜೆ ಶಿವಶಂಕರ್, “ಮರಗಳನ್ನು ಕಡಿಯಲು ಅನುಮತಿ ನೀಡುವ ಮುನ್ನ ಅರಣ್ಯ ಇಲಾಖೆ ಎಲ್ಲ ಕ್ರಮಗಳನ್ನು ಅನುಸರಿಸಿದೆ. ಅದರಂತೆ, ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟವಾದರೂ ಯಾವುದೇ ಆಕ್ಷೇಪಣೆ ಬಂದಿಲ್ಲ” ಎಂದು ಹೇಳಿದ್ದಾರೆ.
ಮರ ಕಡಿಯಲಿಲ್ಲ ಸರಿ ಹಾಗಾದರೆ ರೋಡ್ ಅಗಲ ಮಾಡುವುದಾದರು ಹೇಗೆ ನಾವು ಮುಂದುವರಿಯುವುದಾದರು ಹೇಗೆ ಮರ ಕಡಿಯಿರಿ ಹೊಸ ಮರ ನೆಡಿ ಅದೆಯೇ ಹೊಸ ನೀತಿ ಸಮ್ಮನೇ ಮಾತನಾಡುವುದಲ್ಲ