- ಹುಬ್ಬಳ್ಳಿ ಸೆಂಟ್ರಲ್ ಲಿಂಗಾಯತ ಪ್ರಮುಖರ ಸಭೆ
- ಜಗದೀಶ ಶೆಟ್ಟರ್ ಗೆಲುವು ಈಗಾಗಲೇ ನಿರ್ಧಾರವಾಗಿದೆ
ಲಿಂಗಾಯತ ಮುಖಂಡರನ್ನು ಮೂಲೆಗುಂಪು ಮಾಡುವ ಬಿಜೆಪಿಯ ತಂತ್ರವನ್ನು ನಾವು ಎದುರಿಸಿ ನಿಲ್ಲುತ್ತೇವೆ. ಈ ಬಾರಿಯ ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಹೇಳಿದರು.
ರಾಷ್ಟ್ರೀಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಅಧ್ಯಕ್ಷ ಶರಣಪ್ಪ ಕೊಟಗಿ ನೇತೃತ್ವದಲ್ಲಿ ನಡೆದ ಹುಬ್ಬಳ್ಳಿ ಸೆಂಟ್ರಲ್ ಲಿಂಗಾಯತ ಪ್ರಮುಖರ ಸಭೆಯಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಪ್ರತಿಜ್ಞೆ ಮಾಡಿದರು.
ಈ ಬಾರಿಯ ಚುನಾವಣೆಯು ಬಿಜೆಪಿ ವಿರುದ್ಧ ಲಿಂಗಾಯತ ಹೋರಾಟವಾಗಿದೆ. ಜಗದೀಶ ಶೆಟ್ಟರ್ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಶೆಟ್ಟರ ಅವರನ್ನು ಸೋಲಿಸಲು ಆರ್ಎಸ್ಎಸ್, ಬಿಜೆಪಿ ಎಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ಬಂದರೂ ಲಿಂಗಾಯತ ಶಕ್ತಿಯ ಜೊತೆಗೆ ಸಾಮಾಜಿಕ ನ್ಯಾಯ, ಸಮುದಾಯ ಶಕ್ತಿಯ ಮುಂದೆ ಯಾವ ಆಟವೂ ನಡೆಯಲಾರದು ಎಂದು ಗುಡುಗಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮತದಾನದಿಂದ ವಂಚಿತರಾಗದಂತೆ ಕೂಲಿ ಕಾರ್ಮಿಕರಿಗೂ ವ್ಯವಸ್ಥೆ ಮಾಡಿ
ಸಭೆಯಲ್ಲಿ ಪ್ರೊ. ಎಸ್ ಕೆ ಆದಪ್ಪನವರ, ಪಾರಸಮಲ್ ಜೈನ, ವಿ ಜಿ ಪಾಟೀಲ, ಬಂಗಾರೇಶ ಹಿರೇಮಠ, ರಜತ್ ಉಳ್ಳಾಗಡ್ಡಿಮಠ, ಶಕ್ತಿ ದಾಂಡೇಲಿ, ಮೋಹನ ಹೊಸಮನಿ, ಈಶ್ವರ ಶಿರಸಂಗಿ ಅಭಿಮನ್ಯುರಡ್ಡಿ, ಲಿಂಗರಾಜ ಅಂಗಡಿ, ಎಂ ಎಚ್ ಚಳ್ಳಮರದ, ಮಲ್ಲಿಕಾರ್ಜುನ ಚನ್ನಶೆಟ್ಟಿ, ಪ್ರೊ ಕೆ ಎಸ್ ಕೌಜಲಗಿ, ಮೃತ್ಯುಂಜಯ ಕೊಟಗಿ, ಮಹೇಶ ದ್ಯಾವಪ್ಪನವರ, ಜಿ ವಿ ವಳಸಂಗ ಉಪಸ್ಥಿತರಿದ್ದರು.