ʼಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರುʼ ಎನ್ನುವಂತೆ ಚುನಾವಣೆಯ ಫಲಿತಾಂಶ ಬರುವ ಮೊದಲೇ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ಅವರಿಗೆ ಅವರ ಬೆಂಬಲಿಗರು ʼಶಾಸಕರುʼ ಎಂಬ ನಾಮಫಲಕ ನೀಡಿದ್ದಾರೆ.
ಮೇ 13ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರಲಿದೆ. ಇದಕ್ಕೂ ಮೊದಲೇ ಗೋವಿಂದರಾಜು, ಶಾಸಕರು, ತುಮಕೂರು ನಗರ ಕ್ಷೇತ್ರ ಎಂಬ ನಾಮಫಲಕವನ್ನು ಗೋವಿಂದರಾಜು ಅವರಿಗೆ ನೀಡಿದ್ದಾರೆ. ಫಲಿತಾಂಶಕ್ಕೂ ಮೊದಲೇ ನಾಮಫಲಕ ನೀಡಿರುವುದರಿಂದ ಜೆಡಿಎಸ್ ಬೆಂಬಲಿಗರು ಗೆಲುವಿನ ಅತೀವ ವಿಶ್ವಾಸದಲ್ಲಿರುವುದು ಕುತೂಹಲ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಮತ ಎಣಿಕೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ
ಎನ್. ಗೋವಿಂದರಾಜು ಕೂಡ ಯಾವುದೇ ಮುಜುಗರಕ್ಕೆ ಒಳಗಾಗದೆ ಅಭಿಮಾನಿಗಳು ನೀಡಿದ ನಾಮಫಲಕವನ್ನು ಸ್ವೀಕರಿಸಿದ್ದಾರೆ.