- ʼಬೇವು-ಬೆಲ್ಲದ ಹಂಚಿಕೆ ಕೇವಲ ಆಚರಣೆಯಲ್ಲʼ
- ಅಸೂಯೆ ಇಲ್ಲದ ಸಮಾಜ ಕಟ್ಟೋಣ: ಮಹೇಶ್
ತುಮಕೂರಿನಲ್ಲಿ ಸಮಾನ ಮನಸ್ಕರು, ಹಲವು ಸಮುದಾಯದ ಮುಖಂಡರು ವಿಶೇಷ ರೀತಿಯಲ್ಲಿ ಯುಗಾದಿ ಹಬ್ಬ ಅಚರಣೆ ಮಾಡಿದ್ದಾರೆ. ನಗರದ ಟೌನ್ಹಾಲ್ ಮುಂಭಾಗ ‘ಸೌಹಾರ್ದ ಯುಗಾದಿ’ ಕಾರ್ಯಕ್ರಮ ನಡೆಸಿ, ಪರಸ್ಪರ ಬೇವು-ಬೆಲ್ಲ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಹೋಳಿಗೆ ಹಾಗೂ ಸಿಹಿ ತಿಂಡಿಯನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಹಂಚಿದ್ದಾರೆ. ”ನಮ್ಮೊಳಗೆ ಯಾವುದೇ ರೀತಿಯ ಬೇದಭಾವ ಇಲ್ಲ. ನಾವು ಸಿಹಿ-ಕಹಿಗಳನ್ನು ಹಂಚಿ ತಿನ್ನುವವರಾಗಿದ್ದೇವೆ. ಈ ಮೂಲಕ ಪ್ರೀತಿಯಿಂದ ಬದುಕಬೇಕು ಎಂಬ ಗುಣವನ್ನು ನಮ್ಮ ಹಿರಿಯರು ಹುಟ್ಟುಹಾಕಿದ್ದಾರೆ. ನಮ್ಮ ಗೆಳೆಯರೆಲ್ಲರೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ್ ತಿಳಿಸಿದರು.
“ಬೇವು-ಬೆಲ್ಲದ ಹಂಚಿಕೆ ಕೇವಲ ಆಚರಣೆಯಲ್ಲ, ಈ ಹಬ್ಬ ನಮ್ಮ ಬದುಕಿನ ಭಾಗವಾಗಿದೆ. ಸರ್ವಜನಾಂಗದವರು ಪ್ರೀತಿಯ ಭ್ರಾತೃತ್ವದಿಂದ ಹಾಗೂ ದ್ವೇಷ, ಅಸೂಯೆ ಇಲ್ಲದ ಸಮಾಜ ಕಟ್ಟೋಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.