ಅವೈಜ್ಞಾನಿಕ ಕಸ ವಿಲೇವಾರಿ; ಪರಿಸರಕ್ಕೆ ಅಪಾಯಕಾರಿ

Date:

ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ತೀರಾ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಪ್ರತಿ ದಿನ ನಾವು ಹೊರಗೆ ಎಸೆಯುವ ಹಲವು ಬಗೆಯ ಅನುಪಯುಕ್ತ ವಸ್ತುವೇ ಕಸ. ನಾವು ವರ್ಷದಿಂದ ವರ್ಷಕ್ಕೆ ಜಿದ್ದಿಗೆ ಬಿದ್ದವರಂತೆ ಹೆಚ್ಚೆಚ್ಚು ಕಸವನ್ನು ಉತ್ಪತ್ತಿ ಮಾಡುತ್ತಲೇ ಇದ್ದೇವೆ. ಹಾಗಾಗಿ ಅದರಿಂದಾಗುವ ದುಷ್ಪರಿಣಾಮಗಳು ಹೆಚ್ಚಾಗುತ್ತಲೇ ಇವೆ. ಕಸ ಎಸೆದ ಕೂಡಲೆ ತಾನಾಗಿಯೇ ಎಂದಿಗೂ ಮಾಯವಾಗುವುದಿಲ್ಲ ಎಂಬ ಸಂಗತಿಯನ್ನು ನಾವೆಂದಿಗೂ ಮರೆಯಬಾರದು.

ಕಸದ ರಾಶಿ

ಕೆಲವೊಂದು ವಸ್ತುಗಳು ಕೆಲ ಸಂದರ್ಭಗಳಲ್ಲಿ ಕೊಳೆಯುತ್ತವೆ. ಆದರೆ, ಪ್ಲಾಸ್ಟಿಕ್‌ನಂತಹ ಸಾಮಗ್ರಿಗಳು ಜೈವಿಕವಾಗಿ ಕೊಳೆಯುವುದೇ ಇಲ್ಲ. ಅದು ಪರಿಸರದಲ್ಲಿ ಶಾಶ್ವತವಾಗಿ ಹಾಗೆಯೇ ಉಳಿದು ಬಿಡುತ್ತದೆ. ಆದ್ದರಿಂದ ನಾವು ಇನ್ನಾದರೂ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ಒಂದು ಪ್ಲಾಸ್ಟಿಕ್ ಬ್ಯಾಗ್ ಕೊಳೆಯುವುದಕ್ಕೆ 15-1000 ವರ್ಷಗಳ ಕಾಲ ತೆಗೆದುಕೊಳುತ್ತದೆ. ವೃದ್ಧರು, ಮಕ್ಕಳಿಗೆ ಹಾಕುವಂತಹ ಡೈಪರ್‌, ಮಹಿಳೆಯರು ಬಳಸುವಂತಹ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಕರಗುವುದಕ್ಕೆ 500ರಿಂದ 800 ವರ್ಷಗಳಾಗುತ್ತದೆ. ಜೊತೆಗೆ 500 ವರ್ಷಗಳವರೆಗೆ ಹಾಗೆಯೇ ಇರುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಅವೈಜ್ಞಾನಿಕ ನಿರ್ವಹಣೆ

ಪ್ಲಾಸ್ಟಿಕ್ ಬಾಟಲ್‌ಗಳಂತೂ ಭೂಮಿಯಲ್ಲಿ ಕರಗುವುದೇ ಇಲ್ಲ. ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ನಾವು ಎಲ್ಲೆಂದರಲ್ಲಿ ಎಸೆಯುವಂತಹ ಚಿಕ್ಕ ಕಸವೂ ಕೂಡ ಬ್ಲಾಕ್‌ ಸ್ಪಾಟ್‌ ಆಗುತ್ತದೆ. ಆದ್ದರಿಂದ ಇನ್ನಾದರೂ ಪ್ಲಾಸ್ಟಿಕ್ ಪರಿಣಾಮಗಳ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ಸುದ್ದಿ ಓದಿದ್ದೀರಾ? ಗದಗ | ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದ ಮಾಲಿಪಾಟೀಲ್ ಫೌಂಡೇಶನ್

ಹಸು, ನಾಯಿ, ಹಕ್ಕಿ ಸೇರಿದಂತೆ ಬಹುತೇಕ ಪ್ರಾಣಿ-ಪಕ್ಷಿಗಳು ಕಸವನ್ನು ತಿಂದ ಬಳಿಕ, ಆ ವಸ್ತುಗಳು ರಾಸಾಯನಿಕ ಹಾಗೂ ಸಾಮಗ್ರಿಗಳಾಗಿ ಅವುಗಳ ಹೊಟ್ಟೆಯನ್ನು ಸೇರುತ್ತವೆ. ಈ ಪ್ರಾಣಿಗಳು ಸೇವಿಸಿದ ಪ್ಲಾಸ್ಟಿಕ್‌ಗಳು ಜೀರ್ಣವಾಗುವುದೇ ಇಲ್ಲ. ಹಾಗಾಗಿ ಕರುಳಿನಲ್ಲಿ ಹಾಗೆಯೇ ಉಳಿದು ಅವುಗಳ ಮುಂದಿನ ಆಹಾರ ಸೇವನೆಗೆ ತುಂಬಾ ದೊಡ್ಡಮಟ್ಟದಲ್ಲಿ ನರಳಾಟ ಅನುಭವಿಸುತ್ತವೆ.

ಪ್ರತಿಯೊಬ್ಬರು ತಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಡುತ್ತೇವೆಯೋ, ಹಾಗೆಯೇ ತಮ್ಮ ತಮ್ಮ ರಸ್ತೆ, ಬೀದಿ, ನಗರ ಮತ್ತು ಇಡೀ ಭೂ-ಮಂಡಲವನ್ನು ಸ್ವಚ್ಛವಾಗಿಡಲು ಶ್ರಮಿಸೋಣ.

- ಡಿ. ಬಾಲಾಜಿ, ಹಟ್ಟಿ ಚಿನ್ನದ ಗಣಿ
ತ್ಯಾಜ್ಯ ಪೂರೈಕೆ ಸರಪಳಿ ನಿರ್ವಹಣೆ ರಾಯಚೂರು 

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

23 ವರ್ಷದ ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ...

ತುಮಕೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಇಬ್ಬರ ದುರ್ಮರಣ

ಮುಂದೆ ಹೋಗುತ್ತಿದ್ದದ  ಲಾರಿಗೆ ಹಿಂದಿನಿಂದ ಸರಕು ವಾಹನ ಢಿಕ್ಕಿ ಹೊಡೆದಿದ್ದು, ಇಬ್ಬರು...

ಬೀದರ್‌ | ಹುಬ್ಬಳಿಯ ನೇಹಾ ಹಿರೇಮಠ ಹತ್ಯೆ ಖಂಡನೀಯ : ಸದ್ಭಾಬನಾ ಮಂಚ್

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಕೊಲೆಯನ್ನು ಯಾವ ಸಭ್ಯ...