ಅಪ್ರಾಪ್ತ ಬಾಲಕ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ವರದಿ ಮಾಡುವಾಗ ಬಾಲಕನ ಹೆಸರು ಮತ್ತು ತಾಯಿ ಹಾಗೂ ಅಜ್ಜಿಯ ಹೆಸರು ಸೇರಿದಂತೆ ಬಾಲಕನ ಮಾಹಿತಿಯನ್ನು ಬಹಿರಂಗ ಪಡಿಸಿದ ಪತ್ರಕರ್ತರು, ವರದಿಗಾರರು ಹಾಗೂ ಆರೋಪಿಯೊಬ್ಬರ ಪತ್ನಿಗೆ ಜಾಮೀನು ನೀಡಲು (ಪೋಕ್ಸೊ ವಿಶೇಷ ನ್ಯಾಯಾಲಯ) ನಿರಾಕರಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಆರೋಪಿ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣದ ವರದಿ ಮಾಡಿದ್ದ ಪತ್ರಕರ್ತರು, ಸಂತ್ರಸ್ತ ಬಾಲಕ ವೈಯಕ್ತಿಕ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದರು. ಇದು ಪೋಕ್ಸೊ ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು 10 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಆರೋಪಿಗಳಾದ ಶ್ರೀನಿವಾಸ ಮಾಸ್ತಪ್ಪ ನಾಯ್ಕ್, ವಿಷ್ಣು ಮಂಜಯ್ಯ ದೇವಾಡಿಗ, ವೆಂಕಟೇಶ್ ಸಂತಮ್ಮ ದೇವಾಡಿಗ, ಸ್ವಾತಿ ಗಣಪತಿ ನಾಯ್ಕ್ W/O ಶೈಲೇಶ್ ದೇವಾಡಿಗ, ಗಣಪತಿ ನಾರಾಯಣ ನಾಯ್ಕ್, ದಿನೇಶ್ ಮಂಜುನಾಥ್ ನಾಯ್ಕ್, ಭವಾನಿ ಶಂಕರ್ ವೆಂಕಟ್ರಮಣ ನಾಯ್ಕ್, ಕುಮಾರ್ ಈರಪ್ಪ ನಾಯ್ಕ್, ಜೀವಾತ್ತಮ್ ವಿಠ್ಠಲ್ ಪೈ, ಅರ್ಜುನ್ ಮಲ್ಯ ವಿರುದ್ದ ಭಟ್ಕಳ ಪೊಲೀಸರು ಪೋಕ್ಸೊ ಕಾಯ್ದೆಯ ಕಲಂ 23ರ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಸಂತೆ ಮೈದಾನದಲ್ಲಿ ಮೂಲಸೌಕರ್ಯ ಮರೀಚಿಕೆ; ವ್ಯಾಪಾರಿಗಳ ಅಳಲು
ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಅವರುಗಳ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಆರೋಪಿತರು ನಿರೀಕ್ಷಣಾ ಜಾಮೀನು ಕೋರಿದ್ದರು. ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.