ಅಂಧ ಮಹಿಳೆ ಮೇಲೆ ಕಾಮುಖನೊಬ್ಬ ಅತ್ಯಾಚಾರ ಎಸಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡದಲ್ಲಿ ನಡೆದಿದೆ. ಸಂತ್ರಸ್ತೆ ಆತ್ಯಹತ್ಯೆಗೆ ಬಲಿಯಾಗಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಮಗಳ ಮದುವೆ ನಿಶ್ಚಯವಾಗಿದ್ದ ಕಾರಣ, ಎಲ್ಲರೂ ಮದುವೆ ಸಿದ್ಧತೆಗಾಗಿ ಊರಿಗೆ ತೆರಳಿದ್ದರು. ಕಣ್ಣು ಕಾಣದ ಕಾರಣ, 58 ವರ್ಷದ ಮಹಿಳೆ ಮನೆಯಲ್ಲಿಯೂ ಉಳಿದಿದ್ದರು. ಈ ವೇಳೆ, ಆಕೆಗೆ ಸಹಾಯ ಮಾಡುವುದಾಗಿ ಬಂದಿದ್ದ ಅದೇ ತಾಂಡಾದ ಲೋಕೇಶ್ ಎಂಬ ಕಾಮಪಿಪಾಸು, ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಪರಾರಿಯಾಗಿದ್ದ.
ಕಾಮುಕನ ಕುಕೃತ್ಯದಿಂದ ಗಾಯಗೊಂಡಿದ್ದ ಸಂತ್ರಸ್ತ ವೃದ್ದೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ಮಹಿಳೆ ಶುಕ್ರವಾರ ಮನೆಗೆ ಮರಳಿದ್ದರು. ಕೃತ್ಯದಿಂದ ಮನನೊಂದಿದ್ದ ಆಕೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯಿಂದ ಸಿಟ್ಟಾಗಿದ್ದ ಗ್ರಾಮಸ್ಥರು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ತಹಶೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಲೋಕೇಶನನ್ನು ಬಂಧಿಸಿದ್ದಾರೆ.