ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯಗಳು ಪ್ರಕಟಗೊಳ್ಳಲಿದೆ. ಇಲ್ಲಿದೆ ಬರಹಗಾರ ಅರುಣ್ ಜೋಳದ ಕೂಡ್ಲಿಗಿ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವ-ಸರ್ವಾಧಿಕಾರ ತಲೆಯೆತ್ತುತ್ತಿರುವ ಈ ಹೊತ್ತಲ್ಲಿ ಮತ್ತೆ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾವಣೆ ಮುಖ್ಯವಾಗಿದೆ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ದೇಶವು ಇದೀಗ ಕ್ರೋನಿ ಕ್ಯಾಪಿಟಲ್ಸ್ ಮತ್ತು ಧಾರ್ಮಿಕ ಮತಾಂಧ ಶಕ್ತಿಗಳ ಕೈಗೆ ಜಾರುತ್ತಿದೆ. ಇದನ್ನು ತಡೆಯುವ ಕಾರಣಕ್ಕೆ ಈ ಬಾರಿಯ ಚುನಾವಣೆ ಬಹಳ ಮುಖ್ಯವಾಗಿದೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಮೊದಲಿಗೆ ಅಧಿಕಾರರಹಿತ ಬಹುಸಂಖ್ಯಾತ ದಮನಿತರಲ್ಲಿ ಆತ್ಮವಿಶ್ವಾಸ ತುಂಬುವ ತಾಯ್ತನದ ಸರಕಾರ ಬರಬೇಕಿದೆ. ಕುಸಿಯುತ್ತಿರುವ ಸಂವಿಧಾನದ ಸಮತೆಯ ಆಶಯಗಳನ್ನು ಕೈ ಹಿಡಿದು ಮೇಲೆತ್ತುವ ಸರಕಾರ ಬರಬೇಕಿದೆ. ಖಾಸಗಿ ಸ್ವತ್ತಾಗಿರುವ ಬಹುಪಾಲು ಸರ್ಕಾರಿ ಸಂಸ್ಥೆಗಳನ್ನು ಮತ್ತೆ ಬಿಡಿಸಿಕೊಂಡು ಮೊದಲಿನಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗುವಂತೆ ಬಲಪಡಿಸುವ ಸರಕಾರ ಬರಬೇಕಿದೆ.