ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೆ ವಿವಿಧ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಲೇಖಕಿ - ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರ ಮಾತುಗಳು
ಮತ ಚಲಾವಣೆ ಎಷ್ಟು ಮುಖ್ಯ?
ನೈಜ ಪ್ರಜಾಪ್ರಭುತ್ವದ ಉಳಿವಿಗಾಗಿ, ಅರ್ಹರಿಗೆ ಮತ ನೀಡುವುದು ಪ್ರಜೆಗಳಿಗಿರುವ ಪ್ರಬಲ ಅಸ್ತ್ರ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಜನರ ಹಕ್ಕುಗಳನ್ನು ದಮನಿಸುತ್ತಿರುವ, ಪ್ರತಿಕ್ಷಣ ಭೀತಿಯುಂಟುಮಾಡುತ್ತಿರುವ, ಸರ್ವಾಧಿಕಾರಿ ಧೋರಣೆಯ- ಸದ್ಯದ ಬಿಜೆಪಿ ಸರ್ಕಾರವನ್ನು ಮನೆಗಟ್ಟಲಿಕ್ಕಿರುವ ಸಶಕ್ತ ಅವಕಾಶ ಈ ಚುನಾವಣೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಪ್ರತಿ ಪ್ರಜೆಯೂ ನಿರ್ಭೀತಿಯಿಂದ, ಸುರಕ್ಷಿತವಾಗಿ ಬದುಕುವಂಥ, ಪ್ರಕೃತಿ ಮತ್ತು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಶಾಶ್ವತ ಕಡಿವಾಣ ಹಾಕುವಂಥ ಹಾಗೂ ಪ್ರತಿ ಸಮಸ್ಯೆಗೆ ಮೂಲದಲ್ಲಿ ಪರಿಹಾರ ಕ್ರಮ ಕೈಗೊಳ್ಳುವ ಸರ್ಕಾರ ಇಂದಿನ ಅಗತ್ಯ.
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.