ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಹಿರಿಯ ಸಾಹಿತಿ, ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ ಅವರ ಮಾತುಗಳು
ಮತ ಚಲಾವಣೆ ಎಷ್ಟು ಮುಖ್ಯ?
ಬಿಜೆಪಿ ಎಂಬ ಸರ್ವಾಧಿಕಾರಿ ಗುಣವುಳ್ಳ ಭ್ರಷ್ಟ ಪಕ್ಷವನ್ನು ಸೋಲಿಸಿ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಪ್ರತಿಯೊಬ್ಬ ನಾಗರಿಕನೂ ಈ ಸಲ ಮತದಾನ ಮಾಡಲೇ ಬೇಕು.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಉಗ್ರ ಹಿಂದುತ್ವ ಮತ್ತು ಬಂಡವಾಳವಾದವನ್ನು ಆಧರಿಸಿಕೊಂಡು ಸರಕಾರ ನಡೆಸುವವರನ್ನು ಮೊದಲು ಅಧಿಕಾರದಿಂದ ಕೆಳಗಿಳಿಸಬೇಕು. ಆದರೆ ಅಧಿಕಾರ ಬದಲಾವಣೆ ಒಂದು ಸಣ್ಣ ಹೆಜ್ಜೆ ಮಾತ್ರ. ಬಿಜೆಪಿ ಸೋತರೂ ಹಿಂದುತ್ವದ ರಾಜಕಾರಣ ಮುಂದುವರೆಯಲಿದೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಬಿಜೆಪಿ ಸ್ಥಾಪಿಸಿದ ಸಾಂಸ್ಕೃತಿಕ ರಾಜಕಾರಣವನ್ನು ಆಳವಾದ ಸೈದ್ಧಾಂತಿಕ ತಿಳಿವಳಿಕೆಯ ಬಲದಿಂದ ತಿರಸ್ಕರಿಸಿ ಪರ್ಯಾಯವನ್ನು ಕಟ್ಟುವ ರಾಜಕಾರಣ ನಮಗೀಗ ಬೇಕು. ಹಾಗೆ ಮಾಡಲು ಸರಕಾರದ ಮೇಲೆ ಒತ್ತಡ ಹೇರುವಂಥ ಜನ ಚಳವಳಿಗಳು ರೂಪುಗೊಳ್ಳಲು ಇದು ಸಕಾಲ.