ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಂದಿನ ನನ್ನ ಮತದಲ್ಲಿ ಹಿರಿಯ ಪತ್ರಕರ್ತ ಜಿ ಪಿ ಬಸವರಾಜು ಅವರ ಮಾತುಗಳು
ಮತ ಚಲಾವಣೆ ಎಷ್ಟು ಮುಖ್ಯ?
ನಮ್ಮ ನಾಳಿನ ಬದುಕು ಸುಗಮವಾಗಿ ಸಾಗಬೇಕೆಂದರೆ ನಾವು ಮತಚಲಾಯಿಸಲೇಬೇಕು. ಮತ ಚಲಾವಣೆ ಎನ್ನುವುದು ನಮ್ಮ ಬದುಕಿನ ಪ್ರಶ್ನೆ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಜನತಂತ್ರವೋ, ಸರ್ವಾಧಿಕಾರವೋ- ಈ ಪ್ರಶ್ನೆ ನಮ್ಮ ಮುಂದಿದೆ. ಇದೇ ಈ ಬಾರಿಯ ಚುನಾವಣೆಯನ್ನು ನಿರ್ಧರಿಸುವ ಅಂಶ. ಹೀಗಾಗಿ ಈ ಚುನಾವಣೆ ಪ್ರಜಾಪ್ರಭುತ್ವದ ಜೀವನ್ಮರಣದ ಪ್ರಶ್ನೆಯಾಗಿದೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ನಮ್ಮ ಸಂವಿಧಾನದಿಂದ ದೂರಸರಿದಿರುವ ವ್ಯವಸ್ಥೆಯನ್ನು ಮೊದಲು ಸರಿಪಡಿಸಬೇಕು. ಅಂದರೆ ಸಂವಿಧಾನದ ಜೀವಾಳವಾದ ಸರ್ವರ ಸ್ವಾತಂತ್ರ್ಯ, ಸಮಾನತೆ, ಮತಧರ್ಮ ನಿರಪೇಕ್ಷತೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದು. ಭ್ರಷ್ಟಾಚಾರವಿಲ್ಲದ ಸ್ವಚ್ಛ ಸರ್ಕಾರವನ್ನು ರೂಪಿಸುವುದು.