'ನನ್ನ ಮತ' ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗುತ್ತದೆ. ಇಲ್ಲಿದೆ ಹಿರಿಯ ಸಾಹಿತಿ ಎಲ್ ಎನ್ ಮುಕುಂದರಾಜು ಅವರ ಅಭಿಪ್ರಾಯ.
- ಮತ ಚಲಾವಣೆ ಎಷ್ಟು ಮುಖ್ಯ?
ದೇಶದ ಪ್ರಜೆಗಳಿಗೆ ಸಂವಿಧಾನ ಕೊಟ್ಟ ಬಹುದೊಡ್ಡ ಶಕ್ತಿಯೇ ಮತದಾನ. ದೇವರು ಧರ್ಮದ ಹೆಸರಿನಲ್ಲಿ ಕೋಮುವಾದಿ ಶಕ್ತಿಗಳು ಇಂದು ಸಂವಿಧಾನ ನಾಶಕ್ಕೆ ಮುಂದಾಗಿವೆ. ಅವುಗಳನ್ನು ಹತ್ತಿಕ್ಕಲು ನಮಗಿರುವ ಏಕೈಕ ಮಾರ್ಗ ಮತ ಚಲಾವಣೆ.
- ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಕಳೆದ 70 ವರ್ಷಗಳಿಂದ ಈ ದೇಶದ ಹಿರಿಯರು ಸಂಪಾದಿಸಿದ ಎಲ್ಲ ಸಂಪತ್ತನ್ನು ಡಬ್ಬಲ್ ಇಂಜಿನ್ ಸರ್ಕಾರ ಪರಭಾರೆ ಮಾಡುತ್ತಿದೆ. ಈ ಚುನಾವಣೆಯಲ್ಲಿ ಮತದಾರರು ಕಣ್ಣು ಮುಚ್ಚಿ ಕುಳಿತರೆ, ಇಡೀ ದೇಶವೇ ಹರಾಜಾಗುವ ಸಾಧ್ಯತೆ ಇದೆ.
- ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಪರಂಪರಾಗತವಾಗಿ ಕನ್ನಡಿಗರು ಸಹನಶೀಲ ಹಾಗೂ ಸೌಹಾರ್ದ ಪ್ರಿಯರು. ಜಾತಿ, ಮತ, ಧರ್ಮಗಳ ಭಿನ್ನವಿಲ್ಲದೆ, ಎಲ್ಲರೂ ಕೂಡಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಟ್ಟುವ ಗುಣವುಳ್ಳವರು. ಇದು ಪ್ರಜಾಪ್ರಭುತ್ವದ ಮೂಲ ಧೋರಣೆ. ಪ್ರಜೆಗಳ ಈ ಆಶಯವನ್ನು ಕಾರ್ಯಗತಗೊಳಿಸುವ ಸರ್ಕಾರವೇ ನಮ್ಮ ಆಯ್ಕೆ.
ಒಳ್ಳೆಯ ಮಾಹಿತಿ ಕೊಡಲಿದೆ ಚುನಾವಣೆ ಸಂದರ್ಭದಲ್ಲಿ ಜನರಿಗೆ ಈ ಹರಿವು ಮೂಡಿಸಲು ಇದು ತುಂಬಾ ಸಹಕಾರಿ
ನಿಮ್ಮೆಲ್ಲಾರ ಈ ಕಾರ್ಯ ಶ್ಲಾಘನೀಯ
🌹🌹💐💐🙏🙏