ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಹಿರಿಯ ಪತ್ರಕರ್ತೆ, ಸಾಹಿತಿ ಡಾ ವಿಜಯಾ ಅವರ ಮಾತುಗಳು ಇಲ್ಲಿವೆ
ಮತ ಚಲಾವಣೆ ಎಷ್ಟು ಮುಖ್ಯ?
ಭ್ರಷ್ಟತೆ, ತೆರಿಗೆ ಹೊರೆ, ಸುಡುವ ಬೆಲೆ ಏರಿಕೆ, ಶಿಕ್ಷಣದ ವಿನಾಶ, ಲೋಕದ ಎಲ್ಲ ಕ್ರೌರ್ಯಗಳಿಗೂ ಬಲಿಯಾಗುವ ಬದಲು
ಹಕ್ಕು ಮಾರಿಕೊಳ್ಳದೇ ಯೋಗ್ಯರನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಬೇಕು.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಚುನಾವಣೆ ಎಲ್ಲ ಬಾರಿಯೂ ಮುಖ್ಯ.ಈ ಸಲ ನಮ್ಮ ಸಂವಿಧಾನದ ಉಳಿವಿಗೆ, ಬಹುತ್ವ ಉಳಿಸಿಕೊಳ್ಳಲು, ಬಂಡವಾಳಶಾಹಿಗೆ ದೇಶ ಮಾರಾಟವಾಗದಿರಲು, ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಲು ಈ ಚುನಾವಣೆ ಮತದಾರನಿಗೆ ಅತಿ ಮುಖ್ಯ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಸರ್ಕಾರ ನನ್ನದು, ನನ್ನ ಜನರದು, ಜನಪ್ರತಿನಿಧಿ ನಮ್ಮನ್ನು ಪ್ರತಿನಿಧಿಸಬೇಕು, ಸರ್ವಾಧಿಕಾರಿಯಾಗಕೂಡದು. ಭ್ರಷ್ಟರು, ಅತ್ಯಾಚಾರಿಗಳು, ನ್ಯಾಯವನ್ನೇ ಕೊಳ್ಳುವವರು, ದೇಶ ಕೊಳ್ಳೆಹೊಡೆದು, ಮಾರಾಟಕ್ಕಿಡುವ ಭಂಡರಿರಕೂಡದು. ನಾವು ಕೊಟ್ಟ ಅವಕಾಶ ಎಂಬ ಎಚ್ಚರ ಇರುವ, ನಮ್ಮ ಹಿತಕ್ಕಾಗಿ ಕೆಲಸಮಾಡುವ, ತರತಮ ಭೇದವಿಲ್ಲದ, ಜನಪ್ರೇಮಿ ಸರ್ಕಾರವನ್ನು ನಾವು ಆರಿಸಬೇಕು