ಅಖಿಲ ಭಾರತ ಬೆಂಬಲ ದಿನ |ಹೋರಾಟನಿರತ ಮಹಿಳಾ ಕುಸ್ತಿಪಟುಗಳೊಂದಿಗೆ ರಾಜ್ಯದ ವಿದ್ಯಾರ್ಥಿಗಳಿದ್ದೇವೆ: ಶಿಲ್ಪಾ ಬಿ ಕೆ

Date:

ದೆಹಲಿಯಲ್ಲಿ ಮಹಿಳಾ ಕ್ರೀಡಾಪಟುಗಳು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಮೇ 3ರಂದು ದೆಹಲಿ ವಿಶ್ವವಿದ್ಯಾಲಯದ ಮುಂಭಾಗ ಎಐಡಿಎಸ್‌ಒ ಕಾರ್ಯಕರ್ತರು ಮತ್ತು ಇತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಅವರ ಮೇಲೆ ಪೊಲೀಸ್ ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ಹೋರಾಟನಿರತ ಕುಸ್ತಿಪಟುಗಳಿಗೂ ಕಿರುಕುಳ ನೀಡಿದ್ದಾರೆ. ಇದು ದೆಹಲಿ ಸರ್ಕಾರದ ಅಪ್ರಜಾತಾಂತ್ರಿಕ ಹಾಗೂ ಅತ್ಯಂತ ಕ್ರೂರ ದಾಳಿ ಎಂದು ಎಐಡಿಎಸ್‌ಒ ಕಿಡಿಕಾರಿದೆ. ದೇಶಾದ್ಯಂತ ಶುಕ್ರವಾರ ಅಖಿಲ ಭಾರತ ಬೆಂಬಲ ದಿನ ಆಚರಿಸುತ್ತಿದೆ.

ದೇಶದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ಬಿಜೆಪಿ ಸಂಸದ ಹಾಗೂ ಡಬ್ಲ್ಯೂಎಫ್‌ಐನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಅವರ ಹೋರಾಟಕ್ಕೆ ದೇಶದ ಹಲವು ಗಣ್ಯ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿ-ಯುವಜನರು ಬೆಂಬಲ ನೀಡಿದ್ದಾರೆ.

“ಹಲವು ದಿನಗಳಿಂದ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ಗುರುವಾರ ತಡರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರತಿಭಟನೆಯ ಸ್ಥಳಕ್ಕೆ ಹಾಸಿಗೆಗಳನ್ನು ಸಾಗಿಸುವ ಸಮಯದಲ್ಲಿ, ಒಬ್ಬ ಕುಡುಕ ಪೊಲೀಸ್ ಪೇದೆ ಮಹಿಳಾ ಕುಸ್ತಿಪಟುಗಳನ್ನು ಅಡ್ಡಗಟ್ಟಿ, ಅಸಭ್ಯವಾಗಿ ವರ್ತಿಸಿ, ಅವರನ್ನು ನಿಂದಿಸಿದ್ದಾರೆ. ಈ ನಡತೆಯನ್ನು ಪ್ರತಿರೋಧಿಸಲು ಮುನ್ನುಗ್ಗಿದ ಇತರ ಹೋರಾಟನಿರತ ಕುಸ್ತಿಪಟುಗಳ ಮೇಲೆಯೂ ಪೊಲೀಸ್ ದೌರ್ಜನ್ಯ ನಡೆಸಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ” ಎಂದು ಎಐಡಿಎಸ್‌ಒ ಆರೋಪಿಸಿದೆ.

“ಈ ಎಲ್ಲ ನಡೆಗಳು ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಹೋರಾಟವನ್ನು ಹತ್ತಿಕ್ಕಲು ನಡೆಸಿರುವ ಕ್ರೂರ ಪ್ರಯತ್ನ. ತಮ್ಮ ಘನತೆ ಹಾಗೂ ಗೌರವಕ್ಕಾಗಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಅತ್ಯಂತ ನ್ಯಾಯಸಮ್ಮತವಾಗಿದೆ. ಅವರ ಮೇಲೆ ದೌರ್ಜನ್ಯ ಎಸಗಿರುವ ಎಲ್ಲರನ್ನೂ ಶಿಕ್ಷೆಗೆ ಒಳಪಡಿಸಬೇಕು” ಎಂದು ಸಂಘಟನೆ ಆಗ್ರಹಿಸಿದೆ.

ಈ ಸುದ್ದಿ ಓದಿದ್ದೀರಾ? ಪ್ರತಿಭಟನಾ ನಿರತ ಕುಸ್ತಿಪಟುಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

“ಡಬ್ಲ್ಯೂಎಫ್‌ಐನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೂಡಲೇ ಅಧಿಕಾರದಿಂದ ವಜಾಗೊಳಿಸಿ, ಫೆಡರೇಶನ್‌ನಿಂದ ಉಚ್ಛಾಟನೆ ಮಾಡಬೇಕು. ಲೈಂಗಿಕ ಕಿರುಕುಳ ಘಟನೆಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೂ ಶಿಕ್ಷೆ ನೀಡಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಖಾತ್ರಿ ಪಡಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳಬೇಕು” ಎಂದು ಆಗ್ರಹಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಸುಗಳನ್ನು ಇಸ್ಕಾನ್ ಮಾರಿದಷ್ಟು ಬೇರಾರು ಮಾರಿಲ್ಲ; ಬಿಜೆಪಿ ಸಂಸದೆ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ

ಮಾಂಸ ಮಾರುವವರಿಗೆ ಇಸ್ಕಾನ್ ಮಾರಿರುವಷ್ಟು ಹಸುಗಳನ್ನು ಯಾರೂ ಮಾರಿಲ್ಲ ಎಂದಿರುವ ಬಿಜೆಪಿ...

ಪಶ್ಚಿಮ ಬಂಗಾಳ | ರೈಲು ದುರಂತ ತಪ್ಪಿಸಿದ 12ರ ಹರೆಯದ ಮುರ್ಸಲೀನ್ ಶೇಖ್; ರೈಲ್ವೆ ಇಲಾಖೆಯಿಂದ ಸನ್ಮಾನ

12 ವರ್ಷದ ಬಾಲಕನೊಬ್ಬ ರೈಲು ದುರಂತವನ್ನು ತಪ್ಪಿಸಿರುವ ಘಟನೆ ಇತ್ತೀಚೆಗೆ ಪಶ್ಚಿಮ...

ಚುನಾವಣೆ | ರಾಜಸ್ಥಾನದಲ್ಲಿ ರಾಜೇ ಕಡೆಗಣನೆ; ಬಿಜೆಪಿಗೆ ಸಿಎಂ ಮುಖ ಯಾರು?

ರಾಜಸ್ಥಾನದಲ್ಲಿ ಈ ವರ್ಷದ ಕಡೆಯ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಒಂದು ವೇಳೆ,...

ಹಲ್ಲೆಗೈದು, ಬೆನ್ನಲ್ಲಿ ‘ಪಿಎಫ್‌ಐ’ ಎಂದು ಬರೆದ ಘಟನೆ; ಸೈನಿಕನ ನಾಟಕ ಬಯಲುಗೊಳಿಸಿದ ಕೇರಳ ಪೊಲೀಸರು

'ಪ್ರಚಾರ ಪಡೆಯುವ ಹಿನ್ನೆಲೆಯಲ್ಲಿ ಈ ನಾಟಕವಾಡಿದ್ದಾನೆ' ಎಂದು ಬಾಯ್ಬಿಟ್ಟ ಯೋಧನ ಸ್ನೇಹಿತ 'ಪಿಎಫ್‌ಐ'...