- ನಾನು ದಲಿತ ಮುಖ್ಯಮಂತ್ರಿ ರೇಸ್ ನಲ್ಲಿ ಇಲ್ಲ
- ಹೈಕಮಾಂಡ್ ಸೂಚನೆಯಂತೆ ಸ್ಪರ್ಧಿಸಿದ್ದೆ
ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಇಲ್ಲಿ ಮಂತ್ರಿ ಪದವಿ ಬೇಕು ಎಂದು ಬಯಸುವುದಿಲ್ಲ. ನನಗೆ ಸ್ಥಾನಮಾನ ಕೊಡುವುದರ ಬಗ್ಗೆ ಪಕ್ಷ ಹೈ ಕಮಾಂಡ್ ನಿರ್ಧರಿಸಬೇಕು ಎಂದು ದೇವನಹಳ್ಳಿ ಶಾಸಕ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗೊಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈ ಕಮಾಂಡ್ ನಿರ್ದೇಶನದಂತೆ ರಾಜ್ಯದಲ್ಲಿ ಸ್ಪರ್ಧೆ ಮಾಡಿದ್ದೆ. ಈಗ ಹೈ ಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡುವೆ ಎಂದು ಹೇಳಿದರು.
ಇದೇ ವೇಳೆ ದಲಿತ ಸಿಎಂ ವಿಚಾರದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ಮುನಿಯಪ್ಪ ನಾನು ಈ ಓಟದಲ್ಲಿ ಇಲ್ಲ ಎಂದರು.
ಈ ಸುದ್ದಿ ಓದಿದ್ದೀರಾ?:ರಾಜ್ಯ ರಾಜಕಾರಣದಲ್ಲಿ ಇನ್ನಾರು ತಿಂಗಳೊಳಗೆ ಭಾರೀ ಬದಲಾವಣೆ : ಎಚ್ಡಿಕೆ ಅಚ್ಚರಿ ಹೇಳಿಕೆ
ಇಲ್ಲಿಯವರೆಗೆ ರಾಷ್ಟ್ರ ರಾಜಕಾರಣದಲ್ಲಿದ್ದ ಮುನಿಯಪ್ಪ ದೇವನಹಳ್ಳಿ ಶಾಸಕರಾಗುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ದಲಿತ ಸಮುದಾಯದ ಈ ಹಿರಿಯ ನಾಯಕನಿಗೆ ಪಕ್ಷ ಅದ್ಯಾವ ರೀತಿ ಗೌರವ ನೀಡುತ್ತದೆ ಎನ್ನುವುದು ಈಗ ಕುತೂಹಲದ ವಿಚಾರ.