- ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ 140 ಸ್ಥಾನ ಪಡೆಯುತ್ತದೆ
- ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದು ಗುಲಾಮಗಿರಿಯ ಸಂಕೇತ
ನನ್ನನ್ನು ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ; ಇದು ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಗುಡುಗಿದ ಪರಿ.
ಕೊಪ್ಪಳದಲ್ಲಿನ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಜಗದೀಶ್ ಶೆಟ್ಟರ್, “ನನ್ನನ್ನು ಸೋಲಿಸುವುದಾಗಿ ಘಟಾನುಘಟಿಗಳು ಚಾಲೆಂಜ್ ಮಾಡಿದ್ದಾರೆ. ಆದರೆ ನನ್ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ. ನಾನು ಇವರ ಸವಾಲನ್ನು ಮೆಟ್ಟಿ ಗೆದ್ದು ಬರುತ್ತೇನೆ” ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪಕ್ಷದ ಶಕ್ತಿ ಬಗ್ಗೆ ಮಾತನಾಡಿದ ಶೆಟ್ಟರ್, “ರಾಜ್ಯದಲ್ಲಿ ಕಾಂಗ್ರೆಸ್ಗೆ ಈ ಬಾರಿ 140 ಸ್ಥಾನ ಬರುತ್ತೆ” ಎಂದು ಭವಿಷ್ಯ ನುಡಿದರು.
ತಮ್ಮ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿಯನ್ನು ಜನರೆದುರು ಶೆಟ್ಟರ್ ಎಳೆಎಳೆಯಾಗಿ ಬಿಚ್ಚಿಟ್ಟರು, ಕಮಲ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು.
“ರಾಹುಲ್ ಗಾಂಧಿ ನನ್ನ ವಿಚಾರದಲ್ಲಿಒಂದು ಮಾತು ಹೇಳಿದರು, ಶೆಟ್ಟರೇ ನೀವು ಭ್ರಷ್ಟಾಚಾರಿ ಅಲ್ಲ. ಅದಕ್ಕೆ ಬಿಜೆಪಿ ಟಿಕೆಟ್ ನೀಡಲಿಲ್ಲ ಎಂದರು. ಹೌದು ಅವರು ಹೇಳಿದ್ದು ನಿಜವೇ” ಎಂದರು.
ಈ ಸುದ್ದಿ ಓದಿದ್ದೀರಾ?:ಈಗ ಬಿಜೆಪಿಗೆ ಬೇಕಿರೋದು ಲಿಂಗಾಯತ ಶಾಸಕರೇ ಹೊರತು ನಾಯಕರಲ್ಲ
“ಬಿಜೆಪಿಯವರ ನಿರ್ಧಾರದಿಂದ 6 ಬಾರಿ ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದು ಗುಲಾಮಗಿರಿಯ ಸಂಕೇತ. ಶೆಟ್ಟರ್ ಮತ್ತೆ ಗೆದ್ದರೆ ಮುಂದಕ್ಕೆ ಹೋಗುತ್ತಾರೆನ್ನುವ ಆತಂಕ ಕೆಲವರನ್ನು ಕಾಡಿತು” ಎಂದರು.