- ಯಡಿಯೂರಪ್ಪ ಬಗ್ಗೆ ಬಿಜೆಪಿ ವರಿಷ್ಠರು ಕೋಪಗೊಂಡಿದ್ದು ಸವದಿ ಕುತಂತ್ರದಿಂದ
- ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಸೂಪರ್ ಸೀಡ್ ಮಾಡಿಸುತ್ತೇನೆ
ಬಿ ಎಸ್ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದಿದ್ದು ಲಕ್ಷ್ಮಣ ಸವದಿ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಅಥಣಿ ಟಿಕೆಟ್ ವಿಚಾರವಾಗಿ ಪಕ್ಷಕ್ಕೆ ಸೆಡ್ಡು ಹೊಡೆದಿರುವ ಲಕ್ಷ್ಮಣ ಸವದಿ ‘ಕಮಲ’ ಪಾಳಯದಿಂದ ಹೊರಬಂದು ‘ಕೈ’ ಹಿಡಿದಿದ್ದಾರೆ. ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸವದಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಅಥಣಿಯಲ್ಲಿ ಕಾಂಗ್ರೆಸ್ ತೊರೆದು ಅನೇಕರು ಬಿಜೆಪಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, “ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗುವುದು ಯಡಿಯೂರಪ್ಪ ಅವರಿಗೆ ಇಷ್ಟ ಇರಲಿಲ್ಲ. ಪಕ್ಷದ ಹಿರಿಯ ಮುಖಂಡರ ಸಹಾಯದಿಂದ ಸವದಿ ಉಪಮುಖ್ಯಮಂತ್ರಿಯಾದ” ಎಂದಿದ್ದಾರೆ.
“ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ವರಿಷ್ಠರಿಗೆ ಕೆಟ್ಟ ಕಲ್ಪನೆ ಮೂಡಿಸಬೇಕು ಎಂದು ಸವದಿ ಕುತಂತ್ರ ಮಾಡಿದ್ದರು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಟಿ ರವಿ ಸಿಎಂ ಆಗಲಿ ಎಂದ ಈಶ್ವರಪ್ಪ; ಸಂತೋಷ ಕೂಟದ ಕುತಂತ್ರ ಬಯಲು: ಕಾಂಗ್ರೆಸ್ ಕಿಡಿ
“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸವದಿ ಸೋಲುವುದು ಖಚಿತ. ನಮ್ಮ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಗೆಲುವು ಸಾಧಿಸುತ್ತಾರೆ.
“ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮುಖಾಂತರ 12 ಜನ ನಿರ್ದೇಶಕರ ರಾಜೀನಾಮೆ ಕೊಡಿಸಿ ಸೂಪರ್ ಸೀಡ್ ಮಾಡಿಸುತ್ತೇನೆ” ಎಂದಿದ್ದಾರೆ.
ಲಕ್ಷ್ಮಣ ಸವದಿ ಅವರ ಪ್ರಭಾವ ಇರುವ ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸೇರಿದಂತೆ ಇತರೆ ಕಡೆ ಅವರನ್ನು ರಾಜಕೀಯವಾಗಿ ಮನೆಗೆ ಕಳುಹಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.