- ಕೊಠಡಿ ಪೂಜೆಯಲ್ಲಿ ವಿಭಿನ್ನತೆ ಮೆರೆದ ಕನ್ನಡ ಸಂಸ್ಕೃತಿ ಇಲಾಖೆ ಸಚಿವ
- ಹಾರ, ತುರಾಯಿ ಬದಲು ಪುಸ್ತಕ ಉಡುಗೊರೆ ಕೊಡುವಂತೆ ತಿಳಿಸಿದ ಸಚಿವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಇಂದು ತಮ್ಮ ವಿಧಾನಸೌಧ ಕಚೇರಿ ಪೂಜೆಯನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆದರು.
ಬುಧವಾರ ವಿಧಾನಸೌಧದ ತಮ್ಮ ಕೊಠಡಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರು, ಸಾಂಸ್ಕೃತಿಕ ಕಲಾತಂಡದ ಜೊತೆ ಕೊಠಡಿ ಪ್ರವೇಶಿಸಿ, ಇಲಾಖೆ ವಿಚಾರದಲ್ಲಿನ ತಮ್ಮ ಬದ್ದತೆ ಹಾಗೂ ಕಾಳಜಿ ಮೆರೆದಿದ್ದಾರೆ.
ಬಳಿಕ ಇದೇ ತಂಡಗಳೊಡಗೂಡಿ ಸಾಂಪ್ರದಾಯಿಕ ಸಂಪ್ರದಾಯದಂತೆ ದೇವರ ಪೂಜೆ ನೆರವೇರಿಸಿ ಕಚೇರಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದರು.
ವಿಭಿನ್ನ ಪೂಜಾಕಾರ್ಯಕ್ರಮಕ್ಕೆ ಚಿತ್ರದುರ್ಗದ ಭೋವಿ ಪೀಠದ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಸಚಿವರ ಕುಟುಂಬವರ್ಗ ಮತ್ತು ಕೆಲಸಚಿವರು, ಅಧಿಕಾರಿಗಳು ಸಾಕ್ಷಿಯಾದರು.
ಈ ಸುದ್ದಿ ಓದಿದ್ದೀರಾ?:ಮಾಜಿ ಪ್ರಧಾನಿ ದೇವೇಗೌಡಗೆ ಕಸಾಪ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼ
ಇನ್ನು ತಮ್ಮ ಭೇಟಿಗೆ ಬಂದವರೆಲ್ಲರಿಗೂ ಸಚಿವ ತಂಗಡಗಿ, ಪುಷ್ಪಗುಚ್ಚ ಹಾರ ಸ್ಮರಣಿಕೆ ಇತ್ಯಾದಿಗಳ ಬದಲು ಕೇವಲ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಬೇಕೆಂದು ಮನವಿ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.