ಗುಜರಾತ್ | ಕ್ರಿಕೆಟ್‌ ಚೆಂಡು ಮುಟ್ಟಿದ ವಿಚಾರವಾಗಿ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ ಹಲ್ಲೆ : ಇಬ್ಬರ ಬಂಧನ

Date:

  • ಗುಜರಾತ್‌ ದಲಿತ ವ್ಯಕ್ತಿ ಮೇಲಿನ ಹಲ್ಲೆ ಸಂಬಂಧ ಏಳು ಮಂದಿ ವಿರುದ್ಧ ಪ್ರಕರಣ
  • ಸಿಧ್‌ಪುರ ತಾಲೂಕಿನ ಕಾಕೋಶಿ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು

ಗುಜರಾತ್‌ ರಾಜ್ಯದ ಪಟಾನ್‌ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡು ಮುಟ್ಟಿದನೆಂಬ ಕಾರಣಕ್ಕೆ ಆತನ ಚಿಕ್ಕಪ್ಪನ ಹೆಬ್ಬೆರಳು ಕತ್ತರಿಸಿ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಜೂನ್ 4) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ವರ್ಗದ ಏಳು ಮಂದಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಏಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಧ್‌ಪುರ ತಾಲೂಕಿನ ಕಾಕೋಶಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು ಗುಜರಾತ್‌ ರಾಜ್ಯದ ಹಲವೆಡೆ ಆರೋಪಿಗಳಿಗೆ ಶೋಧ ನಡೆಸಲಾಗಿದೆ.

ದೂರು ಆಧರಿಸಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಭಾನುವಾರ ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು.

“ಕ್ರಿಕೆಟ್ ನೋಡಲು ಬಂದ ದಲಿತ ಬಾಲಕ ಪಂದ್ಯದ ವೇಳೆ ಚೆಂಡನ್ನು ಹಿಡಿದುಕೊಂಡಿದ್ದನು. ಈ ಕಾರಣಕ್ಕೆ ಕೋಪಗೊಂಡ ಆರೋಪಿಗಳು ಬಾಲಕನಿಗೆ ಬೆದರಿಕೆ ಹಾಕಿದರು. ಅಲ್ಲದೆ ಜಾತಿ ನಿಂದನೆಯನ್ನೂ ಮಾಡಿದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ಬಾಲಕನ ಸಹಾಯಕ್ಕೆ ಮುಂದಾಗಿ, ವಿಷಯವನ್ನು ಇತ್ಯರ್ಥ ಪಡಿಸಿದ್ದರು. ಆದರೆ ಕುಲದೀಪ್‌ ಮತ್ತು ಇತರ ಆರು ಆರೋಪಿಗಳು ಅದೇ ದಿನ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಸಂಜೆ 6.30ರ ವೇಳೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

ಈ ವೇಳೆ ಆರೋಪಿಯೊಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಗುಜರಾತ್‌ ದಲಿತ ವ್ಯಕ್ತಿಯ ಮೇಲಿನ ಹಲ್ಲೆ ಸಂಬಂಧ ಕುಲದೀಪ್‌ಸಿಂಗ್ ರಜಪೂತ್, ಸಿದ್ಧರಾಜ್‌ಸಿಂಹ, ರಾಜು ಅಲಿಯಾಸ್ ರಾಜ್‌ದೀಪ್ ದರ್ಬಾರ್, ಜಶ್ವಂತ್‌ಸಿಂಹ ರಜಪೂತ್, ಚಕುಬಾ ಲಕ್ಷ್ಮಂಜಿ, ಮಹೇಂದ್ರಸಿಂಹ ಮತ್ತು ಒಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಮಹಿಳೆಯ ಅರೆನಗ್ನ ದೇಹ ಪ್ರದರ್ಶನ ಅಶ್ಲೀಲವಲ್ಲ; ಕೇರಳ ಹೈಕೋರ್ಟ್‌

ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಗುಜರಾತ್‌ ಪೊಲೀಸರು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಕ್ನೋ | ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಎರಡು ತಿಂಗಳ ಮಗು ಸಹಿತ ಇಬ್ಬರ ಮೃತ್ಯು; 14 ಮಂದಿಗೆ ಗಾಯ

ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೆಲಮಾಳಿಗೆಯ ಮಹಡಿ ಕುಸಿದ ಪರಿಣಾಮ ನಿದ್ರೆಯಲ್ಲಿದ್ದ ಎರಡು...

ಉತ್ತರ ಪ್ರದೇಶ | ಮಥುರಾದಲ್ಲಿ ರೈಲು ಹಳಿಬಿಟ್ಟು ಪ್ಲಾಟ್​ಫಾರ್ಮ್​ ಏರಿದ್ದ ಘಟನೆಗೆ ಸಾಕ್ಷ್ಯ ಒದಗಿಸಿದ ಸಿಸಿಟಿವಿ!

ವಿಡಿಯೋ ಕಾಲ್‌ನಲ್ಲಿದ್ದ ರೈಲು ನಿರ್ವಾಹಕ; ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ವೈರಲ್ ತನ್ನ ಬ್ಯಾಗ್...

ದೆಹಲಿಯ ಬಡಗಿಗಳೊಂದಿಗೆ ಬೆರೆತು ಕೆಲಸ ಮಾಡಿ, ಕಷ್ಟಸುಖ ವಿಚಾರಿಸಿದ ರಾಹುಲ್ ಗಾಂಧಿ

ಭಾರತ್ ಜೋಡೊ ಯಾತ್ರೆಯ ಯಶಸ್ಸಿನ ಬಳಿಕ ಕಳೆದ ಕೆಲವು ಸಮಯದಿಂದ ನಿರಂತರವಾಗಿ...