ಒಡಿಶಾ | ರಾತ್ರಿಯಿಡೀ ಕಾಲುನಡಿಗೆಯಲ್ಲೇ 28 ಕಿ.ಮೀ ಸಾಗಿ ವಧುವಿನ ಗ್ರಾಮ ತಲುಪಿದ ವರ

Date:

  • ರಾಯಗಢದ ವಧುವಿನ ಗ್ರಾಮದಲ್ಲಿ ನಿಗದಿಯಾಗಿದ್ದ ವಿವಾಹ
  • ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಚಾಲಕರ ಸಂಘ

ಚಾಲಕರ ಮುಷ್ಕರದ ಹಿನ್ನೆಲೆ ಮರುದಿನ ವಿವಾಹವಾಗಬೇಕಿದ್ದ ವರ ಹಾಗೂ ಆತನ ಕುಟುಂಬ ರಾತ್ರಿಯಿಡೀ 28 ಕಿ.ಮೀ ಕಾಲು ನಡಿಗೆಯಲ್ಲೇ ವಧುವಿನ ಗ್ರಾಮ ಸೇರಿದ ಅಪರೂಪದ ಘಟನೆ ಒಡಿಶಾದಲ್ಲಿ ಶುಕ್ರವಾರ (ಮಾರ್ಚ್ 17) ವರದಿಯಾಗಿದೆ.

ರಾಯಗಢ ಜಿಲ್ಲೆಯಲ್ಲಿ ವಧುವಿನ ಗ್ರಾಮದಲ್ಲಿ ವಿವಾಹ ನಿಗದಿಯಾಗಿತ್ತು. ಗುರುವಾರ (ಮಾರ್ಚ್ 16) ಚಾಲಕರು ಮುಷ್ಕರ ಹೂಡಿದ್ದ ಕಾರಣ ವಧುವಿನ ಗ್ರಾಮಕ್ಕೆ ತೆರಳಲು ವರನ ಕುಟುಂಬದವರಿಗೆ ಯಾವ ವಾಹನ ಸೌಲಭ್ಯವೂ ದೊರೆಯಲಿಲ್ಲ. ವಿವಾಹ ಮಹೋತ್ಸವಕ್ಕೆ ತೆರಳಬೇಕಾದ ಅನಿವಾರ್ಯತೆ ಕಾರಣ ವರನ ಕುಟುಂಬ ಕಾಲುನಡಿಗೆ ಮೂಲಕ ತೆರಳಲು ನಿರ್ಧರಿಸಿತು.

ಕಲ್ಯಾಣ್‌ಸಿಂಗ್‌ಪುರದ ಬ್ಲಾಕ್‌ನ ಸುನಖಂಡಿ ಪಂಚಾಯತ್‌ನಿಂದ ದಿಬಲಪಾಡು ಗ್ರಾಮವನ್ನು ತಲುಪಲು ಕೆಲವು ಮಹಿಳೆಯರೂ ಸೇರಿದಂತೆ ವರ ಹಾಗೂ ಆತನ ಕುಟುಂಬ ಗುರುವಾರ ರಾತ್ರಿ ಇಡೀ ಕಾಲುನಡಿಗೆಯಲ್ಲಿ ಸಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಚಾಲಕರ ಮುಷ್ಕರದಿಂದಾಗಿ ಸಂಚಾರ ಸೌಲಭ್ಯ ಇರಲಿಲ್ಲ. ನಾವು ಇಡೀ ರಾತ್ರಿ ಕಾಲು ನಡಿಗೆಯ ಮೂಲಕ ಸಾಗಿ ವಧುವಿನ ಗ್ರಾಮ ತಲುಪಿದೆವು. ನಮ್ಮ ಬಳಿ ಬೇರೆ ಆಯ್ಕೆ ಇರಲಿಲ್ಲ” ಎಂದು ವರನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ. ಇಬ್ಬರ ವಿವಾಹ ಶುಕ್ರವಾರ ಬೆಳಿಗ್ಗೆ ಜರುಗಿದೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನದ ಯುವಕನಿಗೆ ಯಶಸ್ವಿ ತೋಳು ಕಸಿ ಶಸ್ತ್ರಚಿಕಿತ್ಸೆ; ಏಷ್ಯಾದಲ್ಲೇ ಮೊದಲೆಂಬ ಹೆಗ್ಗಳಿಕೆ

ವಿವಾಹದ ನಂತರ ತಮ್ಮ ಗ್ರಾಮಕ್ಕೆ ಹಿಂತಿರುಗಲು ಚಾಲಕರ ಸಂಘ ಮುಷ್ಕರ ಹಿಂಪಡೆಯುವುದನ್ನು ಕಾಯುತ್ತ ವಧುವಿನ ನಿವಾಸದಲ್ಲಿ ಉಳಿದಿದೆ.

ವಿಮೆ ಸೌಲಭ್ಯ, ನಿವೃತ್ತಿ ವೇತನ, ಕಲ್ಯಾಣ ಮಂಡಳಿ ರಚನೆ ಮೊದಲಾದ ಬೇಡಿಕೆಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘವು ಬುಧವಾರದಿಂದ (ಮಾರ್ಚ್ 15) ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಚಾಲಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಡಿ ಕೆ ತ್ರಿಪಾಠಿ ನೇಮಕ

ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ...

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...