- ಬೆಲೆ ಏರಿಕೆ ವಿಚಾರ ಮಾತನಾಡದೆ ಹೊರಟ ಶೋಭಾ ಕರಂದ್ಲಾಜೆ
- ಕೇಂದ್ರ ಸಚಿವರ ಪತ್ರಿಕಾಗೋಷ್ಠಿ ವಿಚಾರದಲ್ಲಿ ವಿಪಕ್ಷ ಕಾಂಗ್ರೆಸ್ ಕಿಡಿ
ಅಗತ್ಯ ವಸ್ತುಗಳ ಬೆಲೆ ಏರಿಕೆಗಳ ಬಗ್ಗೆ ಮಾತಾಡಲು ಧಮ್ಮು ತಾಕತ್ತು ಇಲ್ಲದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿಯಿಂದ ಪಲಾಯನ ಮಾಡಿದ್ದಾರೆ. ಇದು ಬಿಜೆಪಿಯ ಜನವಿರೋಧಿ ನಡೆಗೆ ಸಾಕ್ಷಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ನಮ್ಮ ಪಕ್ಷ ಜನಪರ ಘೋಷಣೆಗಳ ಮೂಲಕ ಭರವಸೆ ಮೂಡಿಸುತ್ತಿದೆ. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗಳ ಬಗ್ಗೆ ಮಾತಾಡಲು ದಮ್ಮು ತಾಕತ್ತು ಇಲ್ಲದೆ ಬಿಜೆಪಿ ಪಲಾಯನ ಮಾಡುತ್ತಿದೆ ಎಂದು ಕಿಡಿಕಾರಿದೆ.
ಇನ್ನು ಶೋಭಾ ಕರಂದ್ಲಾಜೆ ಅವರ ಮಾಧ್ಯಮಗೋಷ್ಠಿ ಉಲ್ಲೇಖಿಸಿರುವ ಕಾಂಗ್ರೆಸ್, “ಬಿಜೆಪಿಯ ಅಜೆಂಡಾ ಏನು ಎನ್ನುವುದು ಕೇಂದ್ರ ಸಚಿವೆಯ ಮಾತುಗಳಿಂದ ಸ್ಪಷ್ಟವಾಗಿದೆ” ಎಂದು ಹೇಳಿದೆ. ಜೊತೆಗೆ ಬಿಜೆಪಿಯನ್ನು ಕುಟುಕಿರುವ ವಿಪಕ್ಷ, ಅಭಿವೃದ್ಧಿಯನ್ನೇ ಮಾಡದ ರಾಜ್ಯ ಬಿಜೆಪಿಗೆ ಅಭಿವೃದ್ಧಿ ಬಗ್ಗೆ ಮಾತಾಡಲು ಧೈರ್ಯ ಬರುವುದಾದರೂ ಹೇಗೆ?” ಎಂದು ಪ್ರಶ್ನಿಸಿದೆ.