- ಸಿದ್ದರಾಮಯ್ಯ ರಾಜಕೀಯ ಕಪ್ಪುಚುಕ್ಕೆ ಇಲ್ಲದೆ ನಾಯಕ
- ಕಾಂಗ್ರೆಸ್ ವರಿಷ್ಟರಿಗೆ ಹಿಂದುಳಿದ ವರ್ಗಗಳ ಒಕ್ಕೂಟದ ಮನವಿ
ಅಹಿಂದ ನಾಯಕ ಸಿದ್ದರಾಮಯ್ಯರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದೆ.
ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಕಾಗೋಷ್ಠಿ ನಡೆಸಿದ ಅಹಿಂದ ಮುಖಂಡರ ಒಕ್ಕೂಟ, ಸಿದ್ದರಾಮಯ್ಯ ಕಳೆದ 45ವರ್ಷ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ, ಮುಖ್ಯಮಂತ್ರಿಯಾಗಿ ಭ್ರಷ್ಟಚಾರ ಮುಕ್ತ, ಜನಪರ ಆಡಳಿತ ನೀಡಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದೆ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್ ಸೂರುಭಾಗ್ಯ, ಶಾಧಿಭಾಗ್ಯ ಎಲ್ಲ ಧರ್ಮ, ವರ್ಗವರನ್ನ ಸರಿಸಮಾನವಾಗಿ ಯೋಜನೆಗಳನ್ನು ರೂಪಿಸಿ ಆನುಷ್ಠಾನಕ್ಕೆ ತಂದವರು ಸಿದ್ದರಾಮಯ್ಯ.
ಕಾಯಕವೇ ಕೈಲಾಸ , ಸರ್ವರಿಗೂ ಸಮಪಾಲು, ಸರ್ವರಿಗೂ ಬಾಳು ಎಂಬ ಸಿದ್ದಾಂತ ಆನ್ವಯ ಸಾಗುತ್ತಿರುವ ನಾಯಕ ಈ ಮಾನದಂಡಗಳ ಪರಾಮರ್ಷಿಸಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಒಕ್ಕೂಟ ಸೋನಿಯ ಗಾಂಧಿಜೀಯವರಿಗೆ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ?:ದಲಿತ ಸಿಎಂ ಚರ್ಚೆ ಮುನ್ನೆಲೆಗೆ | 30% ಜನಸಂಖ್ಯೆ ಇರುವ ದಲಿತರಿಗೆ ಸಿಎಂ ಸ್ಥಾನ ಕೊಡಿ; ಆಂದೋಲನ ಆರಂಭ
ಹಾಗೆಯೇ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆರವರಿಗೂ ಇದೇ ಮನವಿಯನ್ನು ಒಕ್ಕೂಟ ನೀಡಿದೆ.
ಇಂದಿನ ಸಭೆಯಲ್ಲಿಹಿಂದುಳಿಗ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಮಾಜಿ ಮಹಾಪೌರ ವೆಂಕಟೇಶ್ ಮೂರ್ತಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್, ಡಾ.ಜಾಬೀಟ್ ಅಬ್ದುಲ್ ,ಅಥರ್ವ್, ಯಲ್ಲಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಜಿ.ಕೃಷ್ಣಮೂರ್ತಿ, ಕುರುಬರ ಸಂಘದ ಮುಖಂಡರುಗಳಾದ ಸುಬ್ರಮಣ್ಯಿ, ರಾಮಕೃಷ್ಣಪ್ಪ, ಹಲವಾರು ಉಪಸ್ಥಿತರಿದ್ದರು.