- ಸಂಸತ್ತಿನಲ್ಲಿ ನಿಲುವು ಮುಂದಿಡುವ ಪ್ರಜಾಸತ್ತಾತ್ಮಕ ಹಕ್ಕನ್ನು ಕೇಳಿದ ರಾಹುಲ್
- ಬಿಜೆಪಿ ಆರೋಪಗಳಿಗೆ ಸಂಸತ್ತಿನಲ್ಲೇ ಉತ್ತರ ನೀಡಲು ಮುಂದಾದ ಕಾಂಗ್ರೆಸ್
ಭಾರತದಲ್ಲಿ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತಿದ್ದರೆ, ಸಂಸತ್ತಿನಲ್ಲಿ ನನ್ನ ಮಾತನ್ನು ಹೇಳಲು ಸಾಧ್ಯವಾಗುತ್ತದೆ. ನಾಳೆಯೇ ಭಾರತದ ಪ್ರಜಾಪ್ರಭುತ್ವದ ಪರೀಕ್ಷೆ ಆಗಲಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ಟೀಕೆಗಳಿಗೆ ಸಂಸತ್ತಿನಲ್ಲೇ ಮಾರುತ್ತರ ನೀಡಲು ಮುಂದಾಗಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಪೀಕರ್ ನನಗೆ ನಾಳೆ ಮಾತನಾಡಲು ಅವಕಾಶ ನೀಡುತ್ತಾರೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
LIVE: Special press briefing by Shri @RahulGandhi at AICC HQ.
— Congress (@INCIndia) March 16, 2023
“ಇಂದು ಸಂಸತ್ತಿಗೆ ತೆರಳಿ ಸ್ಪೀಕರ್ ಬಳಿ ಬಿಜೆಪಿ ಸಚಿವರ ಆರೋಪಗಳಿಗೆ ಸಂಸತ್ತಿನಲ್ಲಿ ಉತ್ತರಿಸಲು ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದೆ. ಆದರೆ ಅವರು ಅವಕಾಶ ಕೊಡುವುದಾಗಿ ಭರವಸೆ ನೀಡಲಿಲ್ಲ, ‘ಕೋರಿಕೆಯನ್ನು ಪರಿಗಣಿಸುತ್ತೇನೆ’ ಎಂದಷ್ಟೇ ಹೇಳಿದ್ದಾರೆ. ನಾನು ಲಂಡನ್ನಲ್ಲಿ ಹೇಳಿದ್ದೆಲ್ಲವೂ ಸಾರ್ವಜನಿಕ ದಾಖಲೆಗಳಿಂದ ತೆಗೆದುಕೊಂಡ ವಿಷಯಗಳು. ಉದ್ಯಮಿ ಗೌತಮ್ ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ ನಾನು ಪ್ರಧಾನಿ ಮೋದಿ ಅವರಿಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ” ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
India’s missile & radar upgrade contract is given to a company owned by Adani & a dubious foreign entity called Elara.
Who controls Elara? Why is India’s national security being compromised by giving control of strategic defence equipment to unknown foreign entities? pic.twitter.com/DJIw7rxPB8
— Rahul Gandhi (@RahulGandhi) March 15, 2023
“ನಾನು ಸಂಸತ್ ಸದಸ್ಯ. ಆದ್ದರಿಂದ ಸದನದಲ್ಲಿ ನನ್ನ ಬಗ್ಗೆ ಆರೋಪ ಕೇಳಿ ಬಂದಾಗ, ನನ್ನ ನಿಲುವು ತಿಳಿಸುವುದು ನನ್ನ ಹಕ್ಕು. ನನಗೆ ಮಾತನಾಡಲು ಅವಕಾಶ ನೀಡಲಾಗುತ್ತದೋ ಇಲ್ಲವೋ ಎಂಬುದು ಭಾರತದ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯಾಗಲಿದೆ. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ ಈ ವಿಷಯದ ಬಗ್ಗೆ ನನ್ನ ಅನಿಸಿಕೆ ಹೇಳುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಪಾದನೆಗಳ ಬಲೆಯಲ್ಲಿ ಕೇಜ್ರೀವಾಲ್ ಸಂಗಾತಿಗಳು
“ಭಾರತ-ಇಸ್ರೇಲ್ನ ಸಂಪೂರ್ಣ ರಕ್ಷಣಾ ಒಪ್ಪಂದ ಅದಾನಿಗೆ ಹೇಗೆ ನೀಡಲಾಗಿದೆ ಎಂಬುದರ ಕುರಿತು ಪ್ರಧಾನಿ ಮೋದಿ ಅವರಿಗೆ ಕೆಲವು ಪ್ರಶ್ನೆಗಳಿವೆ. ಪ್ರಧಾನಿಗೂ ಅದಾನಿಗೂ ಏನು ಸಂಬಂಧ ಎಂಬುದು ನನ್ನ ಪ್ರಶ್ನೆ. ಸಂಸತ್ತಿನಲ್ಲಿ ನಾನು ಈ ಬಗ್ಗೆ ಕೇಳಿದ ಪ್ರಶ್ನೆಗಳನ್ನು ಕಡತಗಳಿಂದ ತೆಗೆದು ಹಾಕಲಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್ನಲ್ಲಿ ಅವರು ಮಾಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಕೇಂದ್ರ ಸರ್ಕಾರ ಒತ್ತಾಯಿಸುತ್ತಿರುವುದರಿಂದ ಸತತ ನಾಲ್ಕನೇ ದಿನವೂ ಕಲಾಪ ಮುಂದುವರಿಯಲಿಲ್ಲ. ಉಭಯ ಸದನಗಳನ್ನು ಇಂದೂ (ಮಾರ್ಚ್ 16) ಮುಂದೂಡಲಾಯಿತು.
PM का विदेश जाना और वहां अडानी को नए बिज़नेस डील मिलना, कोई संयोग नहीं है।
‘मोडानी’ ने भारत की फॉरेन पॉलिसी को फॉरेन ‘डील’ पॉलिसी बना दिया है।
पूरा वीडियो देखें: https://t.co/63gl5II39Q pic.twitter.com/CshP26wK6D
— Rahul Gandhi (@RahulGandhi) March 14, 2023
ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, “ಭಾರತೀಯ ಪ್ರಜಾಪ್ರಭುತ್ವ ಒತ್ತಡದಲ್ಲಿದೆ ಮತ್ತು ವಿರೋಧಿಸುವ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದಾಗ ಮೈಕ್ಗಳನ್ನು ಹೆಚ್ಚಾಗಿ “ಆಫ್” ಮಾಡಲಾಗುತ್ತದೆ. ನಾನು ಮಾತನಾಡುತ್ತಿರುವಾಗ ನನಗೆ ಹಲವಾರು ಬಾರಿ ಹೀಗಾಯಿತು” ಎಂದು ರಾಹುಲ್ ನೀಡಿರುವ ಹೇಳಿಕೆಯನ್ನು ಬಿಜೆಪಿ ವಿರೋಧಿಸುತ್ತಿದೆ.