- 40 ಪ್ರಕರಣಗಳನ್ನು ಹೊತ್ತಿರುವ ಮಣಿಕಂಠಗೆ ಬಿಜೆಪಿ ಟಿಕೆಟ್
- ಪ್ರಧಾನಿ ಮೋದಿಯ ಮೇ 6ರ ಚಿತ್ತಾಪುರ ಪ್ರಚಾರ ರದ್ದಾಗಿದೆ
ಬಿಜೆಪಿಯ ಸ್ಟಾರ್ ಪ್ರಚಾರಕ ಪ್ರಧಾನಿ ಮೋದಿ ಅವರು ಚಿತ್ತಾಪುರದ ಅಭ್ಯರ್ಥಿ, ರೌಡಿಶೀಟರ್ ಮಣಿಕಂಠ ರಾಥೋಡ್ ಪರವಾಗಿ ಮಾಡಬೇಕಿದ್ದ ಪ್ರಚಾರ ರದ್ದಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮಣಿಸಲು ಬಿಜೆಪಿ ರೌಡಿಶೀಟರ್ನನ್ನು ಕಣಕ್ಕಿಳಿಸಿತ್ತು. ಬೆನ್ನಲ್ಲೇ ಸ್ವತಃ ಪ್ರಧಾನಿ ಮೋದಿ ರಾಥೋಡ್ ಪ್ರಚಾರಕ್ಕೆ ಸಮಯ ನಿಗದಿಯಾಗಿತ್ತು,
ಆದರೆ, ಮಣಿಕಂಠ ವಿರುದ್ಧದ ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಸಾಬೀತಾಗಿದ್ದು, ಮೋದಿ ಅವರ ಮೇ 6ರ ಚಿತ್ತಾಪುರ ಪ್ರಚಾರ ಕಾರ್ಯಕ್ರಮ ರದ್ದಾಗಿದೆ. ಈಗಾಗಲೇ ಫೈಟರ್ ರವಿ, ರೌಡಿ ಶೀಟರ್ ಮುದ್ದುಕೃಷ್ಣ ಮೋದಿ ಜೊತೆ ವೇದಿಕೆ ಹಂಚಿಕೊಂಡಿರುವುದರಿಂದ ಸಾಕಷ್ಟು ಮುಜುಗರಕ್ಕೀಡಾಗಿದ್ದಾರೆ.
ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ 40 ಅಪರಾಧ ಪ್ರಕರಣಗಳಿವೆ. ಈ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರುತ್ತಲೇ ಇವೆ. ಇದೀಗ ಮಣಿಕಂಠನ ಮೇಲಿದ್ದ ಕಳ್ಳತನ ಆರೋಪವೊಂದು ಸಾಬೀತಾಗಿದ್ದು, ಇದರಿಂದ ಮೋದಿ ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ನಡೆಸಬೇಕಿದ್ದ ಪ್ರಚಾರ ರದ್ದಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 28 ರಂದು ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ರೋಡ್ ಶೋ ನಡೆಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಮಣಿಕಂಠ ರಾಥೋಡ್ ಪರ ಮತಯಾಚಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯದ್ದು ಡಬಲ್ ದೋಖಾ ಸರ್ಕಾರ : ಬಿ ಕೆ ಹರಿಪ್ರಸಾದ್
ಮಣಿಕಂಠಗೆ ಕೇವಲ 26 ವರ್ಷ. ಆದರೆ ಆತನ ವಿರುದ್ಧ ಕರ್ನಾಟಕದಲ್ಲಿ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲಿ ಸೇರಿದಂತೆ ಬರೋಬ್ಬರಿ 40 ಪ್ರಕರಣಗಳು ದಾಖಲಾಗಿವೆ.
ಪಡಿತರ ಅಕ್ಕಿ ಕಳ್ಳ ಸಾಗಣೆ, ಅಂಗನವಾಡಿ ಮಕ್ಕಳ ಹಾಲಿನ ಪುಡಿ ಕಳ್ಳ ಸಾಗಣೆ ಕೂಡ ಸೇರಿದೆ. ಎಸ್ಎಸ್ಎಲ್ಸಿ ಫೇಲ್ ಆಗಿರುವ ಈತ 29 ಕೋಟಿ ರೂ.ಗಳ ಆಸ್ತಿ ಒಡೆಯ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ.