ಕುಸ್ತಿಪಟುಗಳ ಪ್ರತಿಭಟನೆ | ಬ್ರಿಜ್ ಭೂಷಣ್ ಬೆಂಬಲಿಸಿ ಅಯೋಧ್ಯೆಯಲ್ಲಿ ರ‍್ಯಾಲಿ ನಡೆಸಲಿರುವ ಸಂತರು

Date:

  • ಜೂನ್ 5ರಂದು ಅಯೋಧ್ಯೆಯ ರಾಮ್‌ಕಥಾ ಪಾರ್ಕ್‌ನಲ್ಲಿ ನಡೆಯುವ ರ‍್ಯಾಲಿ
  • ಪೋಕ್ಸೊ ಕಾಯ್ದೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿರುವ ಸಂತರು

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಶನ್‌ ಮುಖ್ಯಸ್ಥ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರನ್ನು ಬೆಂಬಲಿಸಲು ಅಯೋಧ್ಯೆಯ ಸಂತರ ಗುಂಪು ಮುಂದಿನ ವಾರ (ಜೂನ್ 5) ರ‍್ಯಾಲಿ ಆಯೋಜಿಸಲು ಘೋಷಿಸಿದೆ.

“ಜೂನ್ 5ರಂದು ಅಯೋಧ್ಯೆಯ ರಾಮ್‌ಕಥಾ ಪಾರ್ಕ್‌ನಲ್ಲಿ ರ‍್ಯಾಲಿ ನಡೆಸಲಾಗುವುದು. ಅಯೋಧ್ಯೆಯ ಸಂತರು ಹಾಗೂ ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬಂದವರು ಬ್ರಿಜ್‌ಭೂಷನ್‌ ಶರಣ್ ಸಿಂಗ್ ಪರವಾಗಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಾರೆ” ಎಂದು ಸಂತ ಮಹಂತ್ ಸತ್ಯೇಂದ್ರ ದಾಸ್ ಹೇಳಿದ್ದಾರೆ.

“ಪೋಕ್ಸೊ ಕಾಯ್ದೆಯಲ್ಲಿ ಹಲವು ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳಿರುವುದರಿಂದ ನಾವು ಕೂಡ ಅದನ್ನು ವಿರೋಧಿಸುತ್ತೇವೆ. ದೇಶದ ಹಿರಿಯ ಸಂತರು ಮತ್ತು ದಾರ್ಶನಿಕರು ನೀಡಿದ ಕರೆಯ ಮೇರೆಗೆ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ” ಎಂದು ಮಹಂತ್ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಂಡನ್‌ಬರ್ಗ್ ಅದಾನಿ ವರದಿ ಉಲ್ಲೇಖಿಸಿದ್ದ ಎರಡು ವಿದೇಶಿ ಕಂಪನಿಗಳ ಮೇಲೆ ಐಟಿ ತನಿಖೆ 

ಅನೇಕ ಲೋಪ ದೋಷಗಳು ಮತ್ತು ದೋಷಪೂರಿತ ಷರತ್ತುಗಳನ್ನು ಹೊಂದಿರುವ ಪೋಕ್ಸೊ ಕಾಯ್ದೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಸಂತರು ಹೇಳಿದ್ದಾರೆ.

“ಹರಿದ್ವಾರ, ಕಾಶಿ, ಮಥುರಾ ಹಾಗೂ ದೇಶದ ಇತರ ಪುಣ್ಯ ಕ್ಷೇತ್ರಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಸಂತರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ’’ ಎಂದು ಬ್ರಿಜ್‌ಭೂಷಣ್ ಸಿಂಗ್ ಅವರ ಆಪ್ತ ಸಹಾಯಕ ಸುಭಾಷ್‌ ಸಿಂಗ್‌ ತಿಳಿಸಿದ್ದಾರೆ.

ಸಾಕ್ಷಿ ಮಲಿಕ್, ವಿನೇಶ್‌ ಪೋಗಾಟ್ ಹಾಗೂ ಬಜರಂಗ್ ಪುನಿಯಾ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಸಿಂಗ್‌ನನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತವನ್ನು ವಿಭಜಿಸಿ ಹಲವು ದೇಶಗಳನ್ನಾಗಿಸುವ ಉದ್ದೇಶ ಹೊಂದಿದ್ದ ಖಲಿಸ್ತಾನಿ ಉಗ್ರ

ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತವನ್ನು ವಿಭಜಿಸಿ ಅನೇಕ ದೇಶಗಳನ್ನಾಗಿಸಲು...

ಬಿಹಾರ | ದಲಿತ ಮಹಿಳೆಯನ್ನು ನಗ್ನಗೊಳಿಸಿ ಆಕೆಯ ಮೇಲೆ ಮೂತ್ರ ವಿಸರ್ಜಿಸಿದ ಲೇವಾದೇವಿಗಾರ

ಸಾಲದ ಸಂಪೂರ್ಣ ಮರುಪಾವತಿಯ ನಂತರವೂ ಹೆಚ್ಚಿನ ಹಣಕ್ಕಾಗಿ "ನ್ಯಾಯಹೀನ" ಬೇಡಿಕೆಯ ಬಗ್ಗೆ...

ಕಾವೇರಿ ನೀರು ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ

ರಾಜ್ಯದಲ್ಲಿ ತೀವ್ರ ಬರ ಆವರಿಸಿರುವ ನಡುವೆಯೂ ತಮಿಳುನಾಡಿಗೆ ಕರ್ನಾಟಕದ ಜಲಾಶಯಗಳಿಂದ ಕಾವೇರಿ...

Fact Check | ಹೊಸ ಸಂಸತ್ ಭವನಕ್ಕೆ ಯುಪಿಎ ಸರ್ಕಾರ 3,000 ಕೋಟಿ ರೂ. ಅನುಮೋದಿಸಿತ್ತೆ?

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಸರ್ಕಾರ 2012ರಲ್ಲಿ ಯೋಜನೆ ರೂಪಿಸಿತ್ತು....