ಖಾಸಗಿ ಬಸ್ ನೌಕರರ ಸಂಘ (ರಿ) ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಇದರ ವತಿಯಿಂದ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷ ಸಿದ್ದಿಕ್ ಕೆಂಪಿ ನೇತೃತ್ವದಲ್ಲಿ ಉಪ್ಪಿನಂಗಡಿಯಿಂದ ಕಲ್ಲೇರಿಗೆ ಹೋಗುವ ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಹುಂಡ ಗುಂಡಿಗಳನ್ನು ಜೆಸಿಬಿ ಮುಖಾಂತರ ಜಲ್ಲಿ ಮಿಶ್ರಿತ ಮಣ್ಣುಗಳನ್ನು ಹಾಕಿ ಗುಂಡಿಗಳನ್ನು ಮುಚ್ಚುವ ಕಾರ್ಯ ಜರುಗಿತು.
ಉಪ್ಪಿನಂಗಡಿಯಿಂದ ಕಲ್ಲೇರಿಗೆ ಕಡೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾದ ಹಿನ್ನೆಲೆ ಖಾಸಗಿ ಬಸ್ ನೌಕರರ ಸಂಘದ ಪದಾಧಿಕಾರಿಗಳು ಜೆಸಿಬಿ ಮುಖಾಂತರ ಜಲ್ಲಿ ಮಿಶ್ರಿತ ಮಣ್ಣುಗಳಿಂದ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಡೆಸಿದರು.
ಇದನ್ನೂ ಓದಿ: ಪುತ್ತೂರು | ಅಂತರರಾಜ್ಯ ದರೋಡೆಕೋರನ ಬಂಧನ
ಈ ಸಂದರ್ಭದಲ್ಲಿ ಖಾಸಗಿ ಬಸ್ ನೌಕರರ ಸಂಘದ ಇಲ್ಯಾಸ್ ಕರಾಯ, ನಾರಾಯಣಗೌಡ, ಚಾಬಕ್ಯ ಗಣೇಶ್ ಅಳಿಕೆ, ಕೆ.ಅಬ್ದುಲ್ಕ ಶಬೀರ್, ಸಾಧಿಕ್, ಜಯರಾಮ್ ಆಚಾರ್ಯ, ಜಗದೀಶ್, ಎಂ.ಕೆ.ಮಠ, ದಿನೇಶ್, ರಾಜೇಶ್, ಚಂದ್ರಹಾಸ್ ಶೆಟ್ಟಿ, ಬಾಬು, ಸತೀಶ್ ಕಾಮತ್, ಫಾರೂಕು, ಮನ್ಸೂರ್ ಉಪಸ್ಥಿತರಿದ್ದರು.