ರಾಜ್ಯ ಸರ್ಕಾರವು ಕಳೆದ ಮುಂಗಾರು ಅಧಿವೇಶನದಲ್ಲಿ ಅಲೆಮಾರಿ ಕುರಿಗಾಹಿಗಳ ಹಿತರಕ್ಷಣೆಗೆ ಮಂಡಿಸಿರುವ ಕಾಯ್ದೆ ಮಸೂದೆಗೆ ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘ ತೀವ್ರ ಸಂತೋಷ ವ್ಯಕ್ತಪಡಿಸಿ ಸ್ವಾಗತಿಸಿದೆ.
ಬಾಗಲಕೋಟೆ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ನಾಯಕರಾದ ಯಂಕಣ್ಣ ಬಬಲಾದಿ ಹಾಗೂ ಹಣಮಂತ ಯಮಗಾರ ಮಾತನಾಡಿ, ‘ರಾಜ್ಯದ ನಾನಾ ಭಾಗಗಳಲ್ಲಿ ಕುರಿಗಾಹಿಗಳು ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಹೊಸದಲ್ಲ. ಆದರೆ ಇಂತಹ ಅನಾಹುತಗಳನ್ನು ತಡೆಯಲು ಪರಿಣಾಮಕಾರಿ ಕಾನೂನು ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿತ್ತು. ಈಗ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಕುರಿಗಾಹಿಗಳ ಹಕ್ಕುಗಳ ರಕ್ಷಣೆಗೆ ಮಸೂದೆ ಮಂಡಿಸಿರುವುದು ಸಮುದಾಯಕ್ಕೆ ದೊಡ್ಡ ನೆರವಾಗಲಿದೆ’ ಎಂದು ಹೇಳಿದರು.
‘ಈ ಹೋರಾಟಕ್ಕೆ ಧ್ವನಿ ನೀಡಿದ ಹಾಗೂ ಮಸೂದೆ ಜಾರಿಗೆ ತೊಡಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಶುಸಂಗೋಪನಾ ಸಚಿವ ಕೆ ವೆಂಕಟೇಶ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರ ಕಾರ್ಯ ಶ್ಲಾಘನೀಯ, ಕುರಿಗಾಹಿ ಸಮುದಾಯ ಸದಾ ಅವರ ಕೃತಜ್ಞರಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಕೊಪ್ಪಳ | ಸೆ.15ವರೆಗೆ ‘ಡಿಜಿಟಲ್ ಸ್ವಾತಂತ್ರ್ಯ ಜಾಗೃತಿ’ ಅಭಿಯಾನ; ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಚಾಲನೆ
‘ಸರ್ಕಾರದ ಈ ನಿರ್ಧಾರದಿಂದ ಸಾಂಪ್ರದಾಯಿಕ ಕುರಿಗಾಹಿಗಳ ಬದುಕಿಗೆ ಕಾನೂನು ಬಲ ದೊರಕಿದ್ದು, ಇದು ಸಮಾಜದ ಹಿತದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಹಿರಿಯರು ಶಿವಲಿಂಗ ನಿಂಗನೂರ, ಬಿಲ್ಲಾರ, ರಾಘವೇಂದ್ರ ಯಾದಗಿರಿ, ತಿಪ್ಪಣ್ಣ ದೇವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
