ಮೂರು ತಿಂಗಳ ಬಳಿಕ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

Date:

Advertisements

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂರು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

ಜಗತ್ತಿನಲ್ಲೇ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ ಬೆಂಗಳೂರಿನ ಆರ್‌ಸಿಬಿ ತಂಡ ಬರೋಬ್ಬರಿ 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದಿತ್ತು. ಆರ್‌ಸಿಬಿ ಗೆಲುವು ಕಂಡು ಕ್ರೀಡಾಭಿಮಾನಿಗಳು ಹಗಲು ರಾತ್ರಿ ಸಂಭ್ರಮಿಸಿದ್ದರು. ಆದರೆ ಆ ಗೆಲುವಿನ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. 24 ಗಂಟೆಗಳಲ್ಲಿ ಶೋಕದ ವಾತಾವರಣ ತಿರುಗಿತ್ತು.

ಟ್ರೋಫಿ ಗೆದ್ದು ಬೆಂಗಳೂರಿಗೆ ಬಂದಿಳಿದಿದ್ದ ಆರ್‌ಸಿಬಿ ತಂಡವನ್ನು ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದಾಗ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದರು. ಆ ನಂತರ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದವು. ಬಳಿಕ ದುರ್ಘಟನೆಗೆ ಸಂತಾಪ ಸೂಚಿಸಿದ್ದ ಆರ್‌ಸಿಬಿ ತಂಡ ಬಳಿಕ ಸೈಲೆಂಟ್ ಆಗಿತ್ತು.

ಅಲ್ಲಿಂದ ಮೂರು ತಿಂಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿರದ ಆರ್‌ಸಿಬಿ ಇದೀಗ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ.

ಪೋಸ್ಟ್‌ನಲ್ಲಿ ಏನಿದೆ?

ಪ್ರಿಯ 12ನೇ ಸೇನಾಧಿಕಾರಿಗಳೇ, ಇದು ನಿಮಗೆ ನಮ್ಮ ಹೃತ್ತೂರ್ವಕ ಪತ್ರ! ನಿಮ್ಮ 12ನೇ ಸೈನ್ಯದ ಬಗ್ಗೆ ನಾವು ತುಂಬಾ ಸಂತೋಷಪಡುತ್ತೇವೆ. ನಾವು ಮೌನಕ್ಕೆ ಜಾರಿರಲಿಲ್ಲ. ದುಃಖದಲ್ಲಿ ಮುಳುಗಿದ್ದೆವು. ಈ ಸ್ಥಳವು ಒಂದು ಕಾಲದಲ್ಲಿ ನೀವು ಹೆಚ್ಚು ಆನಂದಿಸಿದ ಶಕ್ತಿ, ನೆನಪುಗಳು ಮತ್ತು ಕ್ಷಣಗಳಿಂದ ತುಂಬಿತ್ತು.. ಆದರೆ ಜೂನ್ 4 ಎಲ್ಲವನ್ನೂ ಬದಲಾಗಿ ಹೋಯಿತು.

ಆ ದಿನ ನಮ್ಮ ಹೃದಯಕ್ಕೆ ನೋವನ್ನುಂಟು ಮಾಡಿದೆ. ಅಂದಿನಿಂದ ಮೌನವು ಎಲ್ಲವನ್ನೂ ಸ್ತಬ್ಧವಾಗಿತ್ತು. ಆ ಮೌನದಲ್ಲಿ, ನಾವು ದುಃಖಿಸುತ್ತಿದ್ದೇವೆ, ಕೇಳುತ್ತಿದ್ದೇವೆ & ಕಲಿಯುತ್ತಿದ್ದೇವೆ. ನಿಧಾನವಾಗಿ, ನಾವು ಕೇವಲ ಪ್ರತಿಕ್ರಿಯೆಗಿಂತ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ನಾವು ನಿಜವಾಗಿಯೂ ನಂಬುವ ವಿಷಯದಲ್ಲಿ ಸಾಗಿದ್ದೇವೆ.

ಆರ್‌ಸಿಬಿ ನಮ್ಮ ಅಭಿಮಾನಿಗಳನ್ನು ಗೌರವಿಸುವ, ನೋವನ್ನು ಗುಣಪಡಿಸುವ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಅಗತ್ಯವನ್ನು ತಿಳಿದುಕೊಂಡಿದೆ. ನಮ್ಮ ಸಮುದಾಯ ಮತ್ತು ಅಭಿಮಾನಿಗಳು ರೂಪಿಸಿದ ಅರ್ಥಪೂರ್ಣ ಕ್ರಿಯೆಗೆ ವೇದಿಕೆಯಾಗಿದೆ. ನಾವು ಇಂದು ಈ ಸ್ಥಳಕ್ಕೆ ಹಿಂತಿರುಗುತ್ತೇವೆ, ಆಚರಣೆಯೊಂದಿಗೆ ಅಲ್ಲ ಆದರೆ ಕಾಳಜಿಯೊಂದಿಗೆ. ಹೊಸತನ್ನು ಹಂಚಿಕೊಳ್ಳಲು. ನಿಮ್ಮೊಂದಿಗೆ ನಿಲ್ಲಲು. ಮುಂದೆ ನಡೆಯಲು, ಒಟ್ಟಿಗೆ. ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯಲು. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.. ಎಂದು ಟ್ವೀಟ್‌ ಮಾಡಿದೆ.

ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಂಡ ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

Download Eedina App Android / iOS

X