ಉಡುಪಿ | ಪ್ರಜ್ವಲ್ ರೇವಣ್ಣರಿಂದ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನಿಖಿಲ್ ಕುಮಾರಸ್ವಾಮಿ ನೈತಿಕ ಬೆಂಬಲ ಸೂಚಿಸಲಿ

Date:

Advertisements

ನಿಖಿಲ್ ಕುಮಾರ ಸ್ವಾಮಿಯವರೇ ನೀವು ನಿಜವಾಗಿಯೂ ನೈತಿಕ ಬೆಂಬಲ ಸೂಚಿಸ ಬೇಕಾಗಿರುವುದು ಪ್ರಜ್ವಲ್ ರೇವಣ್ಣರಿಂದ ಅನ್ಯಾಯಕ್ಕೊಳಗಾದ ಮಹಿಳಾ ಸಂತ್ರಸ್ತ್ರರಿಗೆ, ಯಾಕಂದ್ರೆ ಅಲ್ಲಿ ಅವರನ್ನು ಕಾಪಾಡಲು ಅಣ್ಣಪ್ಪ ಸ್ವಾಮಿಯೂ ಇಲ್ಲಾ ಹಾಗೇ ಮಂಜುನಾಥ ಸ್ವಾಮಿಯೂ ಇಲ್ಲಾ, ಇಲ್ಲಿ ನೀವು ಹೇಳಿದ ಧರ್ಮಾಧಿಕಾರಿಯವರನ್ನು ಕಾಪಾಡಲು ಪಕ್ಕದಲ್ಲೇ ಅಣ್ಣಪ್ಪ ಸ್ವಾಮಿಯೂ ಇದ್ದಾನೆ ಮತ್ತೆ ಮಂಜುನಾಥ ಸ್ವಾಮಿಯೂ ಇದ್ದಾನೆ. ಹಾಗಾಗಿ ಸದಾ ಅವರನ್ನು ಕಾಪಾಡುತ್ತಾರೆ ಎಂದು ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.

ನಿನ್ನೆ ದಿನ ಧರ್ಮಸ್ಥಳದಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡ ಧರ್ಮಸ್ಥಳ ಯಾತ್ರೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸತ್ಯ ಯಾತ್ರೆ ಹೊಳೆನರಸೀಪುರಕ್ಕೆ ಯಾಕೆ ಹೋಗಿಲ್ಲಾ ? ಅನ್ಯಾಯವಾಗಿ ಬಡವರ, ದುರ್ಬಲರ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಮ್ಮ ಕಾಲ ಬುಡದಲ್ಲೇ ಆಯಿತಲ್ಲಾ ಅದು ತಮಗೆ ಕಾಣಿಸಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಆ ಅಮಾಯಕ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಲು, ಸಾಂತ್ವಾನ ಹೇಳಲು ತಾವು ಯಾವ ಯಾತ್ರೆ ಕೈಗೊಂಡಿರಿ ? ಹಾಗೆಯೇ ಧರ್ಮಾಧಿಕಾರಿಗಳು ನೊಂದಿದ್ದಾರೆ ಅವರಿಗೆ ನೖತಿಕ ಬೆಂಬಲ ಸೂಚಿಸಲು ಬಂದಿದ್ದೇವೆ ಎಂದಿರಲ್ಲಾ.
ಅಲ್ಲಿ ನಿಮ್ಮ ದೊಡ್ಡಪ್ಪ ಮಗನಿಂದಾಗಿ ತುಂಬಾ ನೊಂದಿದ್ದಾರೆ, ನೋವಿನ ಕೊರಗಿನಲ್ಲೇ ಕಾಲ ಕಳೆಯುತ್ತಿದ್ದಾರೆ ಅವರಿಗೇಕೆ ನೖತಿಕ ಬೆಂಬಲ ತುಂಬಲು ತಮ್ಮ ಸತ್ಯ ಯಾತ್ರೆ ಹೋಗಿಲ್ಲಾ ? ಎಂದು ಮಾಧ್ಯಮದ ಮೂಲಕ ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X