ಹಿಂದುತ್ವದ ವಿಚಾರ ಹಿಡಿದು ಧರ್ಮರಕ್ಷಣೆ ಹೆಸರಿನಲ್ಲಿ ಧರ್ಮಸ್ಥಳ ಯಾತ್ರೆ ಮಾಡಿರುವ ಬಿಜೆಪಿಗೆ ಜನ ಸೇರಿಸಲು ಸಾಧ್ಯ ಆಗದೆ ಮುಖಭಂಗವಾಗಿದೆ, ನಿಜವಾದ ಹಿಂದೂಗಳು ಯಾರು ಕೂಡ ಬಿಜೆಪಿಗೆ ಮಣೆ ಹಾಕದೆ, SIT ತನಿಖೆ ಹಾಗೂ ಹಿಂದೂ ಯುವತಿ ಸೌಜನ್ಯ ಪರ ಧ್ವನಿ ಆಗಿರುವುದು ಕಂಡು ಬಂದಿದೆ. ನಿಜವಾದ ಹಿಂದೂಗಳು ಯಾರು ಕೂಡ ಈ ನಕಲು ಬಿಜೆಪಿ ಹಿಂದುಗಳನ್ನು ನಂಬೋದಿಲ್ಲ ಅನ್ನೋದಕ್ಕೆ ಧರ್ಮಸ್ಥಳ ಧರ್ಮ ಸಂರಕ್ಷಣೆ ಯಾತ್ರೆ ಸಾಕ್ಷಿ ಆಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿಯವರ ಅಜೆಂಡಾ ದಲ್ಲಿ ವಾಮಾಮಾರ್ಗದ ಮೂಲಕ ಅಧಿಕಾರಕ್ಕೆ ಬರೋದು ಸಹ ಅವರ ಅಜೆಂಡಾ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ದೇಶದ ಹಾಗೂ ರಾಜ್ಯದ ಜನತೆಗೆ ಸುಳ್ಳು ಅಜೆಂಡಾ ಸಂದೇಶ ನೀಡಿ ಅಧಿಕಾರಕ್ಕೆ ಬಂದಿರೋದೆ ಹೆಚ್ಚು ಎಂದು ಹೇಳಿದ್ದಾರೆ .
ಜೆಡಿಎಸ್ ರಾಜ್ಯದ ಯುವ ಅಧ್ಯಕ್ಷರು ನಿಖಿಲ್ ಕುಮಾರ್ ಸ್ವಾಮಿ, ಮೊದಲು ಸಾವಿರಾರು ಹೆಣ್ಣು ಮಕ್ಕಳ ಬಲಾತ್ಕಾರ ಮಾಡಿರುವ ಅವನ ಸ್ವಂತ ಸಂಬಂಧಿ ಪ್ರಜ್ವಲ್ ರೇವಣ್ಣನ ಮನೆಗೆ ಯಾತ್ರೆ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲಿ. ಇವರುಗಳ ಧರ್ಮ ಸಂರಕ್ಷಣಾ ಯಾತ್ರೆ ಅಲ್ಲಿ ಹಿಂದೂ ಧರ್ಮಕ್ಕೆ ಅಪಚಾರ ಮಾಡಿದವರೇ ಹೆಚ್ಚು ವೇದಿಕೆ ಅಲ್ಲಿ ಇರುವುದು ಮತ್ತೊಮ್ಮೆ ಹಿಂದೂ ಧರ್ಮಕ್ಕೆ ಬಿಜೆಪಿ, ಹಾಗೂ ಜೆಡಿಎಸ್ ಅನ್ಯಾಯ ಮಾಡಿರುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.