ಶಿವಮೊಗ್ಗ | ಹಬ್ಬಗಳು ಕೇವಲ ಸಂಭ್ರಮಕ್ಕಲ್ಲ, ಸಮಾಜದ ಕನಸುಗಳಿಗೂ ಅರ್ಥ ತುಂಬಬೇಕು : ದೀಪಕ್ ಸಿಂಗ್

Date:

Advertisements

ಶಿವಮೊಗ್ಗ, ಧಾರ್ಮಿಕ ಹಬ್ಬಗಳು ಕೇವಲ ದೇವರ ಪೂಜೆಯ ಆಚರಣೆಗಳಾಗಿರದೆ, ಸಮಾಜಕ್ಕೆ ಮೌಲ್ಯಗಳ ಪಾಠ ಕಲಿಸುವ ಪ್ರಬಲ ವೇದಿಕೆಗಳಾಗಿಯೂ ರೂಪಾಂತರಗೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾದದ್ದು, ಈ ಬಾರಿ ಶಿವಮೊಗ್ಗ ನಗರದ ಕಲ್ಲಹಳ್ಳಿಯಲ್ಲಿ ನಡೆದ 19ನೇ ವರ್ಷದ ಶ್ರೀ ವಿನಾಯಕ ಗೆಳೆಯರ ಬಳಗದ ಗಣೇಶೋತ್ಸವ.

ಗಣಪತಿ ಹಬ್ಬ ಎಂದರೆ ಸಂಭ್ರಮ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು. ಆದರೆ ಕಲ್ಲಹಳ್ಳಿಯ ಗಣೇಶೋತ್ಸವವು ಅದಕ್ಕಿಂತ ಮೀರಿ “ಸೇವೆಯೇ ಪರಮ ಧರ್ಮ” ಎಂಬ ಮಂತ್ರವನ್ನು ಸಾರಿತು.

1002227204

ನಗರ ಜೆಡಿಎಸ್ ಅಧ್ಯಕ್ಷರು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ದೀಪಕ್ ಸಿಂಗ್ ಅವರು ಹಿಂದುಳಿದ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಗಳನ್ನು ಹಂಚುವ ಮೂಲಕ, ಅವರು ಶಿಕ್ಷಣದ ಬೆಳಕನ್ನು ಹಚ್ಚಿದರು.

“ಮಕ್ಕಳ ಭವಿಷ್ಯ ಬದಲಿಸಲು ದೊಡ್ಡ ಯೋಜನೆಗಳ ಅಗತ್ಯವಿಲ್ಲ, ಸಣ್ಣ ಸಹಾಯವೂ ಸಾಕು” ಎಂಬ ಅವರ ಮಾತು, ಅರ್ಥಪೂರ್ಣವಾಗಿ ಎಲ್ಲರ ಮನ ಮುಟ್ಟಿತು.

ಹಿರಿಯರಿಗಾಗಿ ಗೌರವದ ಆಟಗಳು, ಮಕ್ಕಳಿಗಾಗಿ ಮನರಂಜನಾತ್ಮಕ ಸ್ಪರ್ಧೆಗಳು, ಪ್ರಕೃತಿ ಶಾಲೆಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ – ಪ್ರತಿಯೊಂದು ಚಟುವಟಿಕೆಯೂ ಸಮುದಾಯದ ಒಗ್ಗಟ್ಟನ್ನು ಹೆಚ್ಚಿಸಿತು.

ಸ್ಥಳೀಯ ನಿವಾಸಿಗಳು, ಸೇವಾ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಈ ಉತ್ಸವದಲ್ಲಿ ಪಾಲ್ಗೊಂಡು ಒಗ್ಗಟ್ಟು ಮತ್ತು ಭಾವೈಕ್ಯತೆಯ ವಾತಾವರಣವನ್ನು ಮೂಡಿಸಿದರು.

1002227203

ದೇವರ ಮುಂದೆ ಬೆಳಗುವ ದೀಪದ ಜ್ಯೋತಿಯಷ್ಟೇ, ಮಕ್ಕಳ ಕೈಯಲ್ಲಿ ಸಿಗುವ ಪುಸ್ತಕದ ಬೆಳಕೂ ಮಹತ್ವದ್ದು. ಪೂಜಾ ಮಂಟಪದಲ್ಲಿ ಹರಿಯುವ ಭಕ್ತಿಗೀತೆಗಳಷ್ಟೇ, ಸಮಾಜದಲ್ಲಿ ಮೂಡುವ ಸಹಾನುಭೂತಿ ಮತ್ತು ನ್ಯಾಯದ ಧ್ವನಿಗೂ ಬೆಲೆ ಇದೆ.ಹಬ್ಬಗಳು ಕೇವಲ ಸಂಭ್ರಮಕ್ಕಲ್ಲ, ಅವುಗಳಿಂದ ಸಮಾಜದ ಕನಸುಗಳಿಗೂ ಅರ್ಥ ತುಂಬಬೇಕು ಎಂಬುದನ್ನು ದೀಪಕ್ ಸಿಂಗ್ ನೇತೃತ್ವದಲ್ಲಿ ತೋರಿಸಿಕೊಟ್ಟಿದ್ದಾರೆ.

ದೀಪಕ್ ಸಿಂಗ್ ಅವರ ದಾನಶೀಲತೆ ಹಾಗೂ ಗೆಳೆಯರ ಬಳಗದ ಸೇವಾ ಮನೋಭಾವವು ಈ ತತ್ವವನ್ನು ಜೀವಂತಗೊಳಿಸಿದೆ. ಇಂತಹ ಕಾರ್ಯಕ್ರಮಗಳು ಭವಿಷ್ಯದಲ್ಲಿ ಸಮಾಜದ ಒಳಿತಿಗಾಗಿ ಧಾರ್ಮಿಕ ಹಬ್ಬಗಳನ್ನು ಹೊಸ ಅರ್ಥದಲ್ಲಿ ರೂಪಿಸಲು ಪ್ರೇರಣೆಯಾಗಬೇಕು.

1002227164

ಶ್ರೀ ವಿನಾಯಕ ಗೆಳೆಯರ ಬಳಗ ಕಳೆದ 19 ವರ್ಷಗಳಿಂದ ಹಬ್ಬವನ್ನು ಧಾರ್ಮಿಕ ಹಾಗೂ ಸಾಮಾಜಿಕ ಸಮನ್ವಯದ ಮಾದರಿಯನ್ನಾಗಿಸಿದೆ.

ದಯಾನಂದ ಸಲಾಗಿ, ಕಾರ್ತಿಕ್, ನವೀನ್, ಶೇಖರ್ ನಾಯಕ್, ಕೃಷ್ಣಪ್ಪ, ಕಿಟ್ಟಿ ಹಾಗೂ ಅನೇಕ ಸದಸ್ಯರ ನಿಸ್ವಾರ್ಥ ಶ್ರಮದಿಂದ, ಈ ಬಾರಿಯ ಉತ್ಸವವು ಕೇವಲ ಒಂದು ಹಬ್ಬವಲ್ಲ, ಸಮುದಾಯದ ಸಂವಾದ ಮತ್ತು ಒಗ್ಗಟ್ಟಿನ ಸಂಕೇತವಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X