ಸಿಂದಗಿ | ಕಾಂಗ್ರೆಸ್ ಕಚೇರಿ ತೆರಿವಿನ ಬಳಿಕ ವ್ಯಾಪಾರಸ್ಥರ ಮಳಿಗೆ ತೆರವುಗೊಳಿಸುವ ಹೊಣೆ ಮಾಜಿ ಶಾಸಕದ್ದೇ: ಅಶೋಕ ಮನಗೂಳಿ

Date:

Advertisements

ಎಪಿಎಂಸಿ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ ತೆರೆದಿದ್ದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಂಡು ಕಚೇರಿ ತೆರವುಗೊಳಿಸುವೆ. ಭೂಸನೂರ ಅವರ ಅವಧಿಯಲ್ಲಿಯೇ ಎಪಿಎಂಸಿಯಲ್ಲಿ 16 ವ್ಯಾಪಾರಸ್ಥರು ನಿಯಮದ ಬೇರೆ ಬೇರೆ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದಕ್ಕೆಲ್ಲ ಆಸ್ಪದ ನೀಡಿದವರು ಭೂಸನೂರ. ಕಾಂಗ್ರೆಸ್ ಕಚೇರಿ ತೆರಿವಿನ ಬಳಿಕ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸಲು ಮಾಜಿ ಶಾಸಕರೇ ನೇರ ಹೊಣೆಗಾರರು ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನನ್ನ ವಿರುದ್ಧ 15 ಆಪಾದನೆಗಳಲ್ಲಿ ಒಂದನ್ನಾದರೂ ಸಾಬೀತುಪಡಿಸಲು ತಿಂಗಳ ಕಾಲಾವಕಾಶ ಕೊಡುತ್ತೇನೆ. ಅಷ್ಟರೊಳಗೆ ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಾಬೀತುಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು” ಎಂದು ಸವಾಲು ಹಾಕಿದರು.

“ಆಪಾದನೆ ಮಾಡುವುದು ದೊಡ್ಡದಲ್ಲ. ಅದನ್ನು ಸಾಬೀತುಪಡಿಸುವುದು ಬದ್ಧತೆ. 2020ರಲ್ಲಿ ದಿವಂಗತ ಎಂಸಿ ಮನಗೂಳಿ ಅವರ ಅಧಿಕಾರ ಅವಧಿಯಲ್ಲಿ 250 ಮನೆಗಳು ಮಂಜೂರಾಗಿದ್ದು, ಅದನ್ನು ನಾನೇ ಮಾಡಿಸಿದ್ದೆಂದು ಬೂಸನೂರ ಬೀಗುತ್ತಿರುವುದು ಎಷ್ಟು ಸರಿ? ತೆರವುಗೊಳಿಸಲಾದ ಸರ್ವೆ ನಂಬರ್ 842ರ ಜಾತಿಯ ಬಗ್ಗೆ ನನಗೇನೂ ಗೊತ್ತೇ ಇಲ್ಲವೆಂದು ಹೇಳುವ ಮಾಜಿ ಶಾಸಕರು, ಉಪಚುನಾವಣೆ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ವಿಷಯದ ಬಗ್ಗೆ ಸಲ್ಲಿಸಿದ ಮನವಿ ಪತ್ರ ನಮ್ಮ ಬಳಿ ಇದೆ. ಮಾಜಿ ಶಾಸಕ ಭೂಸನೂರ ಇದರ ಕುರಿತು ಪರಿಹಾರ ಕಂಡುಕೊಳ್ಳಬಹುದಿತ್ತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ನಮ್ಮ ಕುಟುಂಬದ ಬಗ್ಗೆ ಆಪಾದನೆ ಮಾಡುವ ಮೂಲಕ ಕೀಳುಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ” ಎಂದು ಹರಿಹಾಯ್ದರು.

“ನೊಂದ 84 ಬಡ ಕುಟುಂಬಗಳಿಗೆ ಸ್ಥಳಾವಕಾಶ ಮಾಡಿಕೊಟ್ಟ ಸರ್ಕಾರ, ತಾಲೂಕ ಆಡಳಿತ, ಜಿಲ್ಲಾಡಳಿತದಿಂದ ಸಿಗುವ ಎಲ್ಲ ಅನುದಾನ ಬಳಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಕಾಲೊನಿ ಮಾಡಿಕೊಡುವಲ್ಲಿ ಕಾರ್ಯ ಪ್ರವೃತ್ತನಾಗಿ ಅವರ ನೋವನ್ನು ನಿವಾರಿಸುವ ಎಲ್ಲ ಪ್ರಯತ್ನವನ್ನು ಪುರಸಭೆ ಹಾಗೂ ಅಧಿಕಾರಿಗಳ ಸಹಯೋಗದೊಂದಿಗೆ ಮಾಡುತ್ತೇನೆ. ಈ ಕಾರ್ಯಕ್ಕೆ ವಿರೋಧ ಪಕ್ಷದವರು ಸಹಕಾರ ನೀಡಲಿ” ಎಂದು ಆಶಿಸಿದರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಪಘಾತಗಳ ತಡೆಗೆ ಎನ್‌ಎಚ್-50ರಲ್ಲಿ ಸಿಸಿಟಿವಿ ಅಳವಡಿ‌ಕೆ: ಸಂಸದ ಕೆ ರಾಜಶೇಖರ್ ಹಿಟ್ನಾಳ್

“2021ರಲ್ಲಿಯೇ ಸಿಂದಗಿಯ ಜನಸಂಖ್ಯೆ 50,000ದಷ್ಟು ಇತ್ತು. ಆ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಸಿಂದಗಿಯನ್ನು ನಗರಸಭೆ ಮಾಡುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿರುವ ಒಂದಾದರೂ ಉದಾಹರಣೆ ತೋರಿಸಲಿ. ಆದರೆ, ಭೂಸನೂರ ಅವರಿಗೆ ನಗರಸಭೆಯಾದುದು ಖುಷಿ ಇಲ್ಲ. ಇದರಲ್ಲಿಯೂ ರಾಜಕೀಯ ಮಾಡುವ ದುರುದ್ದೇಶ ಅವರದು. ಮೆರವಣಿಗೆ ಮಾಡಿಕೊಂಡಿದ್ದು ನಾನಲ್ಲ. ಸಿಂದಗಿಯ ಜನತೆ ನಗರಸಭೆಯಾದ ಖುಷಿಯಲ್ಲಿ ತಮ್ಮ ಅಭಿಮಾನದಿಂದ ವಿಜಯೋತ್ಸವ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಲಮೇಲ ಭಾಗದಲ್ಲಿ ತೋಟಗಾರಿಕಾ ಬೆಳೆಗಳಿಲ್ಲ. ಮಹಾವಿದ್ಯಾಲಯ ಸ್ಥಾಪಿಸಲು ಸೂಕ್ತ ವಾತಾವರಣವಿಲ್ಲವೆಂಬ ಕಾರಣ ನೀಡಿ ಇಡಗುಂಜಿಗೆ ವರ್ಗಾವಣೆ ಮಾಡುವಂತೆ ಪತ್ರ ಕೊಡಿಸಿದ್ದು, ಇದೇ ಭೂಸನೂರ” ಎಂದು ಕುಟುಕಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X